ಧರ್ಮಪುರಕ್ಕೆ ಜೂನ್-4 ರಂದು ಮುಖ್ಯಮಂತ್ರಿಗಳ ಭೇಟಿ, ಸ್ಥಳ ಪರಿಶೀಲನೆ ಮಾಡಿದ ಶಾಸಕಿ ಪೂರ್ಣಿಮಾ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಧರ್ಮಪುರ ಕೆರೆಗೆ ನೀರು ಹರಿಸುವ ಪೈಪ್ ಲೈನ್ ಕಾಮಗಾರಿ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಜೂನ್-4 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯೂರು ತಾಲೂಕಿನ ಧರ್ಮಪುರಕ್ಕೆ ಆಗಮಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಕಾರ್ಯಕ್ರಮ ನಡೆಸಲು ಸ್ಥಳ ಪರಿಶೀಲನೆ ಮಾಡಿದರು.
ಹೊಸಹಳ್ಳಿ ಚೆಕ್ ಡ್ಯಾಂ ನಿಂದ ಗೂಳ್ಯ ಮಾರ್ಗವಾಗಿ ಹೊಸಹಳ್ಳಿ, ಸೂಗೂರು, ಮುಂಗುಸುವಳ್ಳಿ, ಹರಿಯಬ್ಬೆ, ಧರ್ಮಪುರ ವರೆಗೆ ಅಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು. ಕಾರ್ಯಕ್ರಮ ನಡೆಯುವ ಸ್ಥಳ ಧರ್ಮಪುರ ಅಥವಾ ಹರಿಯಬ್ಬೆ ಗ್ರಾಮದಲ್ಲಿ ನಿಗದಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
What’s your Reaction?
+1
+1
+1
+1
+1
+1
+1