3-4 ತಿಂಗಳಿಂದ ಗೃಹಲಕ್ಷ್ಮಿ ದುಡ್ಡು ಹಾಕಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಾಂತ್ರಿಕ ದೋಷ ಸಚಿವರೆ ಇದೆಂಥಾ ಸಮರ್ಥನೆ
? ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಎಂದು ಜೆಡಿಎಸ್ ಟೀಕಿಸಿದೆ.

ಚುನಾವಣೆ ಗೆಲ್ಲಲೇಬೇಕೆಂದು ವಾಮಮಾರ್ಗದಲ್ಲಿ ಉಪಚುನಾವಣೆ ವೇಳೆ 3 ಕ್ಷೇತ್ರದಲ್ಲಿ ಮಾತ್ರ ಗೃಹಲಕ್ಷ್ಮಿ ಹಣ ಹಾಕಿದ್ದೀರಿ. ಆದರೆ ಇನ್ನುಳಿದ ಜಿಲ್ಲೆಗಳಲ್ಲಿ ಯಾಕೆ 3-4 ತಿಂಗಳಿಂದ ದುಡ್ಡು ಹಾಕಿಲ್ಲ ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಇದನ್ನು ಪ್ರಶ್ನಿಸಿದರೇ ನಿಮಗೇಕೆ ಈ ಪರಿ ಸಿಟ್ಟು ? ದಿವಾಳಿಯಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲವಾ? ಯಾವುದೇ ಕ್ಷೇತ್ರಕ್ಕೂ ಅನುದಾನ ಸಿಗುತಿಲ್ಲ.

ಅಭಿವೃದ್ಧಿ ಶೂನ್ಯ ಸರ್ಕಾರ ಗ್ಯಾರಂಟಿಗಾಗಿ ಕರ್ನಾಟಕ ರಾಜ್ಯವನ್ನು ದಿವಾಳಿ ಮಾಡುತ್ತಿದೆ. ಅದಕ್ಕೆ ನಿಮ್ಮ ಹತಾಶೆಯ ಮಾತುಗಳೇ ಸಾಕ್ಷಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.

 

- Advertisement -  - Advertisement - 
Share This Article
error: Content is protected !!
";