ಜನತಾ ಪರಿವಾರದ ಹಿರಿಯರಾದ ಕಮಲಾದೇವಿ ಪ್ರೇಮರಾಜ್ ಇನ್ನಿಲ್ಲ

News Desk

ಜನತಾ ಪರಿವಾರದ ಹಿರಿಯರಾದ ಕಮಲಾದೇವಿ ಪ್ರೇಮರಾಜ್ ಇನ್ನಿಲ್ಲ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಹಳೆ ಅಂಚೆ ಕಚೇರಿ ರಸ್ತೆಯ ಮರ್ಚೆಂಟ್ಸ ಬ್ಯಾಂಕ್ ಮುಖ್ಯ ಕಚೇರಿ ಹತ್ತಿರದ ನಿವಾಸಿ ಕಮಲಾ ದೇವಿ ಪ್ರೇಮ್ ರಾಜ್ ಠಾಕೂರ್(98) ಅವರು ಭಾನುವಾರ ಸಂಜೆ ನಿಧನರಾದರು.

ಮೃತರಿಗೆ ಪುತ್ರ ಬಿಜೆಪಿ ಮುಖಂಡರಾದ ವಕೀಲ ಲೀಲಾಧರ ಠಾಕೂರ್ ಸೇರಿದಂತೆ 6 ಜನ ಮಕ್ಕಳಲ್ಲಿ, 5 ಗಂಡು, 1 ಹೆಣ್ಣು ಮಕ್ಕಳಿದ್ದಾರೆ. ಮೃತರು ಜನತಾ ಪರಿವಾರದ ಮುಖಂಡರಾಗಿದ್ದು

- Advertisement - 

ರಾಮಕೃಷ್ಣ ಹೆಗಡೆ ಲೀಲಾವತಿ ಪ್ರಸಾದ್, ಬಿ.ಎಲ್ ಗೌಡ, ಡಿ. ಮಂಜುನಾಥ್, ಏಕಾಂತಯ್ಯ ಜೊತೆ ಸಮಾಜ ಸೇವೆ ಮಾಡಿದ್ದಾರೆ. ರಜಪೂತ ಸಮಾಜದವರಾಗಿದ್ದಾರೆ.

ಸೋಮವಾರ ಮಧ್ಯಾಹ್ನ12.30ಕ್ಕೆ ನಗರದ ಮುಕ್ತಿಧಾಮದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

- Advertisement - 

Share This Article
error: Content is protected !!
";