ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಉದ್ಭವಿಸಿರುವ ಅತಿವೃಷ್ಠಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಬಾಧಿತ ಪ್ರದೇಶಗಳಲ್ಲಿ ತಕ್ಷಣವೇ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸಂಪುಟದ ಸಚಿವರಿಗೆ ಪ್ರಮುಖ ಸೂಚನೆ ನೀಡಿದ್ದಾರೆ.
ಸಂಪುಟದ ಸಚಿವರು ತಮಗೆ ಜವಾಬ್ದಾರಿ ವಹಿಸಿರುವ ಉಸ್ತುವಾರಿ ಜಿಲ್ಲೆಗಳಿಗೆ ತಕ್ಷಣವೇ ಪ್ರವಾಸ ಕೈಗೊಂಡು, ಪ್ರತಿಯೊಂದು ತಾಲ್ಲೂಕಿನ ವಾಸ್ತವ ಸ್ಥಿತಿಯನ್ನು ಖುದ್ದು ಪರಿಶೀಲನೆ ನಡೆಸುವಂತೆ ಆದೇಶಿಸಲಾಗಿದೆ.
ಸಚಿವರ ಪ್ರವಾಸ ಮತ್ತು ಪರಿಶೀಲನೆ:
ಸಚಿವರು ಪ್ರತಿಯೊಂದು ತಾಲ್ಲೂಕಿಗೆ ಖುದ್ದು ಭೇಟಿ ನೀಡಿ, ಸ್ಥಳದಲ್ಲೇ ಸಾರ್ವಜನಿಕರು ಹಾಗೂ ರೈತರ ಅಹವಾಲುಗಳನ್ನು ಆಲಿಸಲಿದ್ದಾರೆ. ಪರಿಶೀಲನೆಯ ನಂತರ ವಾಸ್ತವ ಸ್ಥಿತಿಯ ಸಮಗ್ರ ವರದಿಯನ್ನು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ತಕ್ಷಣ ಸಲ್ಲಿಸುವಂತೆ ಪತ್ರದ ಮೂಲಕ ಸೂಚಿಸಲಾಗಿದೆ.
ಜಿಲ್ಲಾವಾರು ಸಚಿವರ ಹಂಚಿಕೆ ವಿವರ (30 ಜಿಲ್ಲೆಗಳು):
ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ವಹಿಸಿರುವ ಜಿಲ್ಲೆಗಳ ವಿವರ ಹೀಗಿದೆ:
ಡಾ. ಜಿ. ಪರಮೇಶ್ವರ – ತುಮಕೂರು, ರಘುಮೂರ್ತಿ – ಚಿತ್ರದುರ್ಗ, ಬಿ.ಎಸ್. ಸುರೇಶ್ (ಬೈರತಿ) – ಚಿಕ್ಕಬಳ್ಳಾಪುರ, ಕೆ.ಹೆಚ್. ಮುನಿಯಪ್ಪ - ಬೆಂಗಳೂರು ಗ್ರಾಮಾಂತರ, ರಾಮಲಿಂಗಾರೆಡ್ಡಿ – ಕೋಲಾರ, ಹೆಚ್. ಸಿ. ಬಾಲಕೃಷ್ಣ - ಬೆಂಗಳೂರು ದಕ್ಷಿಣ, ಬಿ.ಝೆಡ್. ಜಮೀರ್ ಅಹಮ್ಮದ್ ಖಾನ್ – ವಿಜಯನಗರ, ಕೆ.ಜೆ. ಜಾರ್ಜ್ – ಚಿಕ್ಕಮಗಳೂರು, ಕೆ.ಎಂ. ಶಿವಲಿಂಗೇ ಗೌಡ – ಹಾಸನ,
ಮಧು ಬಂಗಾರಪ್ಪ – ಶಿವಮೊಗ್ಗ. ಎಂ.ಬಿ. ಪಾಟೀಲ್ – ವಿಜಯಪುರ, ವಿಜಯಾನಂದ ಕಾಶಪ್ಪನವರ್ – ಬಾಗಲಕೋಟೆ, ಬಸವರಾಜ ರಾಯರೆಡ್ಡಿ – ಗದಗ, ಎಸ್.ಎಸ್. ಮಲ್ಲಿಕಾರ್ಜುನ – ದಾವಣಗೆರೆ, ರುದ್ರಪ್ಪ ಲಮಾಣಿ – ಹಾವೇರಿ, ಸತೀಶ್ ಜಾರಕಿಹೊಳಿ – ಬೆಳಗಾವಿ, ಸಂತೋಷ್ ಲಾಡ್ – ಧಾರವಾಡ, ಲಕ್ಷ್ಮಣ ಸವದಿ – ಉತ್ತರಕನ್ನಡ, ಪ್ರಿಯಾಂಕ್ ಖರ್ಗೆ – ಕಲಬುರಗಿ, ಅಜಯ್ ಧರಂ ಸಿಂಗ್ – ರಾಯಚೂರು, ಈಶ್ವರ್ ಖಂಡ್ರೆ – ಬೀದರ್, ಯು.ಟಿ. ಖಾದರ್ - ದಕ್ಷಿಣ ಕನ್ನಡ & ಉಡುಪಿ, ಪಿ.ಎಂ. ನರೇಂದ್ರ ಸ್ವಾಮಿ – ಕೊಡಗು, ಯತೀಂದ್ರ ಸಿದ್ದರಾಮಯ್ಯ – ಮೈಸೂರು, ಚಲುವರಾಯಸ್ವಾಮಿ – ಮಂಡ್ಯ, ಪುಟ್ಟರಂಗಶೆಟ್ಟಿ – ಚಾಮರಾಜನಗರ, ಬಿ. ನಾಗೇಂದ್ರ – ಬಳ್ಳಾರಿ, ಶರಣ ಪ್ರಕಾಶ್ ಪಾಟೀಲ – ಯಾದಗಿರಿ, ಶಿವರಾಜ್ ತಂಗಡಗಿ – ಕೊಪ್ಪಳ, ಕೃಷ್ಣ ಬೈರೇಗೌಡ - ಬೆಂಗಳೂರು ನಗರ.
"ಸಂಕಷ್ಟದಲ್ಲಿರುವ ಜನರ ಜೊತೆಗೆ ನಮ್ಮ ಸರ್ಕಾರ ನಿಲ್ಲಲಿದೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ತುರ್ತು ಪರಿಹಾರ ಹಾಗೂ ಸಹಾಯ ಕ್ರಮಗಳನ್ನು ಸರ್ಕಾರ ಖಂಡಿತ ಕೈಗೊಳ್ಳಲಿದೆ," ಎಂದು ಸರ್ಕಾರ ಸ್ಪಷ್ಟಪಡಿಸಿದೆ.



