ಲೋಕಸಭೆ ಸ್ಪೀಕರ್​ ವಿರುದ್ಧದ ಅವಿಶ್ವಾಸ ಚರ್ಚೆಗೆ 10 ಗಂಟೆ ನಿಗದಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ವಿಪಕ್ಷಗಳ ನಾಯಕರಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ, ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು ಸಜ್ಜಾಗಿರುವ ವಿಪಕ್ಷಗಳಿಗೆ ಅದರ ಮೇಲಿನ ಚರ್ಚೆಗೆ 10 ಗಂಟೆ ನಿಗದಿ ಮಾಡಲಾಗಿದೆ.

ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಅವರು ಸಂಸತ್​ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ನಿರ್ಣಯ ಅಂಗೀಕರಿಸಿ ಚರ್ಚೆಗೆ ಅನುಮತಿ ಕೋರಿದರು. ಇದರ ಪರವಾಗಿ 50ಕ್ಕೂ ಹೆಚ್ಚು ಸಂಸದರು ಬೆಂಬಲ ನೀಡಿದರು. ಸ್ಪೀಕರ್​ ಪೀಠದಲ್ಲಿ ಕುಳಿತಿದ್ದ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರು ಇದಕ್ಕೆ ಅನುಮತಿ ನೀಡಿದರು.
ಚರ್ಚೆಗೆ 10 ಗಂಟೆಗಳ ಕಾಲಾವಕಾಶ ನಿಗದಿ ಮಾಡಲಾಗಿದೆ. ಸಂಸದರು ಈ ಮಿತಿಯೊಳಗೆ ಚರ್ಚೆ ನಡೆಸಲು ಬದ್ಧರಾಗಿರಬೇಕು. ವಿರೋಧ ಪಕ್ಷಗಳ ಕೋರಿಕೆಗೆ ಅನುಮತಿ ನೀಡಲಾಗಿದೆ ಎಂದು ಪಾಲ್ ಹೇಳಿದರು.

- Advertisement - 

ಉಪಸಭಾಪತಿ ನೇಮಿಸಲು ಆಗ್ರಹ:
ಎಐಎಂಐಎಂ
ಸಂಸದ ಅಸಾದುದ್ದೀನ್ ಓವೈಸಿ ಅವರು ಇದೇ ವೇಳೆ ಲೋಕಸಭೆ ಉಪಸಭಾಪತಿಯ ನೇಮಕ ಕುರಿತು ಚರ್ಚೆ ಹುಟ್ಟುಹಾಕಿದರು.

ಕಳೆದ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರ ಉಪಸಭಾಪತಿ ನೇಮಿಸಿಲ್ಲ. ಇದು ಸಾಂವಿಧಾನಿಕ ನಿರ್ವಾತ ಸೃಷ್ಟಿಸಿದೆ ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಆರೋಪಿಸಿದರು.
ಪೀಠದಲ್ಲಿ ಕುಳಿತಿದ್ದ ಜಗದಾಂಬಿಕಾ ಪಾಲ್ ಅವರ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದ ಅವರು
, ನಿಮ್ಮನ್ನು ಲೋಕಸಭಾ ಸ್ಪೀಕರ್ ನೇಮಿಸಿದ್ದಾರೆ. ಸ್ಪೀಕರ್​ ವಿರುದ್ಧದ ನಿರ್ಣಯದ ಚರ್ಚೆಯನ್ನು ಉಪಸಭಾಪತಿಗಳ ಅಧ್ಯಕ್ಷತೆಯಲ್ಲಿ ನಡೆಯಬೇಕಲ್ಲವೇ ಎಂದು ಪ್ರಶ್ನಿಸಿದರು.

- Advertisement - 

ಬಿಜೆಪಿ ಸಂಸದರಾದ ರವಿಶಂಕರ್ ಪ್ರಸಾದ್ ಮತ್ತು ನಿಶಿಕಾಂತ್ ದುಬೆ ಅವರುಗಳು ವಿಪಕ್ಷಗಳ ಆಕ್ಷೇಪಣೆಗಳಿಗೆ ತಿರುಗೇಟು ನೀಡಿ ಈ ಆಕ್ಷೇಪವೇ ಆಧಾರ ರಹಿತ ಎಂದು ಕಾಲೆಳೆದರು.
ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಮಾತನಾಡಿ
, ಉಪ ಸಭಾಪತಿಗಳ ವಿಷಯವನ್ನು ಚರ್ಚಿಸುವ ಅಗತ್ಯವೇ ಇಲ್ಲ ಎಂದು ಹೇಳಿದರು.

ಚರ್ಚೆಯಲ್ಲಿ ಭಾಗಿ?:
ಮೂಲಗಳ ಪ್ರಕಾರ
, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಿರ್ಣಯದ ಮೇಲಿನ ಚರ್ಚೆಯನ್ನು ಪ್ರಾರಂಭಿಸಲಿದ್ದಾರೆ. ಬಿಜೆಪಿ ಸಂಸದರಾದ ಅನುರಾಗ್ ಠಾಕೂರ್, ನಿಶಿಕಾಂತ್ ದುಬೆ, ರವಿಶಂಕರ್ ಪ್ರಸಾದ್ ಮತ್ತು ಭರ್ತೃಹರಿ ಮಹ್ತಾಬ್ ಈ ವಿಷಯದ ಕುರಿತು ಹೇಳಿಕೆಗಳನ್ನು ನೀಡಲಿದ್ದಾರೆ. ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಚಿರಾಗ್ ಪಾಸ್ವಾನ್ ಕೂಡ ಚರ್ಚೆಯ ಸಂದರ್ಭದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಲೋಕಸಭಾ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರುವ ನಿರ್ಣಯದ ಪರವಾಗಿ ಕಾಂಗ್ರೆಸ್ ಸಂಸದರಾದ ಗೌರವ್ ಗೊಗೊಯ್, ಮನೀಶ್ ತಿವಾರಿ, ದೀಪೇಂದರ್ ಸಿಂಗ್ ಹೂಡಾ ಮತ್ತು ಜೋತಿಮಣಿ ಅವರು ಲೋಕಸಭೆಯಲ್ಲಿ ತಮ್ಮ ವಾದ ಮಂಡಿಸಲಿದ್ದಾರೆ.

Share This Article
error: Content is protected !!
";