ರಾಷ್ಟ್ರಪತಿ ಪದಕಕ್ಕೆ ಭಾಜನರಾದ 19 ಪೊಲೀಸ್ ಅಧಿಕಾರಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೊಡ ಮಾಡುವ ರಾಷ್ಟ್ರಪತಿಗಳ ಪದಕಕ್ಕೆ ರಾಜ್ಯದ 19 ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ. ಓರ್ವ ಅಧಿಕಾರಿ ವಿಶಿಷ್ಟ ಸೇವಾ ಪದಕ ಹಾಗೂ 18 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಶ್ಲಾಘನೀಯ ಸೇವಾ ಪದಕ ಗೌರವಕ್ಕೆ ಭಾಜನರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ ಪುರಸ್ಕೃತರಾಗಿ ಎಸ್.ಬದರಿನಾಥ್ – ಎಸ್‌ಪಿ, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರನ್ನ ಆಯ್ಕೆ ಮಾಡಲಾಗಿದೆ.

- Advertisement - 

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:
ಡಾ‌.ಚಂದ್ರಗುಪ್ತ – ಐಜಿಪಿ
, ಹೆಚ್ಚುವರಿ ನಿರ್ದೇಶಕರು ರಾಜ್ಯ ಗುಪ್ತವಾರ್ತೆ, ಬೆಂಗಳೂರು, ಕೆ.ಎಂ.ಶಾಂತರಾಜು – ಪೊಲೀಸ್ ಅಧೀಕ್ಷಕರು, ಐಎಸ್‌ಡಿ, ಬೆಂಗಳೂರು, ಕಲಾ ಕೃಷ್ಣಸ್ವಾಮಿ – ಎಐಜಿಪಿ ಅಪರಾಧ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು, ಡಾ‌‌.ರಾಮಕೃಷ್ಣ ಮುದ್ದೇಪಾಲ – ಕಮಾಂಡೆಂಟ್, 9ನೇ ಪಡೆ ಕೆಎಸ್ಆರ್‌ಪಿ, ಬೆಂಗಳೂರು, ಎನ್.ವೆಂಕಟೇಶ್ – ಎಸ್‌ಪಿ – ಸಿಐಡಿ, ಬೆಂಗಳೂರು, ಪ್ರಕಾಶ್ ರಾಠೋಡ – ಎಸಿಪಿ – ಕೆ.ಜಿ.ಹಳ್ಳಿ ಉಪವಿಭಾಗ, ಬೆಂಗಳೂರು, ಜಿ.ಪ್ರವೀಣ್ ಬಾಬು – ಪೊಲೀಸ್ ಇನ್ಸ್‌ಪೆಕ್ಟರ್ – ಮಹಾದೇವಪುರ ಠಾಣೆ, ಬೆಂಗಳೂರು, ಬಿ.ಎಸ್.ಸತೀಶ್ – ಪೊಲೀಸ್ ಇನ್ಸ್‌ಪೆಕ್ಟರ್ – ಪರಪ್ಪನ ಅಗ್ರಹಾರ ಠಾಣೆ, ಬೆಂಗಳೂರು,

ಶಾಂತಾರಾಮ – ಪೊಲೀಸ್ ಇನ್ಸ್‌ಪೆಕ್ಟರ್ – ನಂದಗುಡಿ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ, ಎಡ್ವಿನ್ ಪ್ರದೀಪ್.ಎಸ್ – ಪೊಲೀಸ್ ಇನ್ಸ್‌ಪೆಕ್ಟರ್, ಬೆಸ್ಕಾಂ, ಜೆ.ಝಾನ್ಸಿರಾಣಿ – ಪಿಎಸ್ಐ, ಎಸ್‌ಸಿಆರ್‌ಬಿ, ಬೆಂಗಳೂರು, ಗುರುರಾಜ ಮಹಾದೇವಪ್ಪ ಬೂದಿಹಾಳ – ಎಆರ್‌ಎಸ್ಐ, ಡಿಪಿಓ, ಗದಗ, ರಾಕೇಶ್.ಎಂ.ಜೆ – ಆರ್‌ಎಚ್‌ಸಿ – ಕೆಎಸ್ಆರ್‌ಪಿ 4ನೇ ಕಾರ್ಯಪಡೆ, ಬೆಂಗಳೂರು, ಶಂಶುದ್ದೀನ್ – ಹೆಡ್ ಕಾನ್ಸ್‌ಟೇಬಲ್ – ಗಣಕಯಂತ್ರ ವಿಭಾಗ, ಡಿಪಿಓ ಕೊಪ್ಪಳ, ಶಂಕರ ವೈ – ಸಿಎಚ್‌ಸಿ, ಐಎಸ್‌ಡಿ, ಬೆಂಗಳೂರು, ಅಲಂಕಾರ ರಾಕೇಶ – ಸಿಎಚ್‌ಸಿ, ಪೊಲೀಸ್ ಆಯುಕ್ತರ ಕಚೇರಿ, ಕಲಬುರಗಿ ನಗರ, ರವಿ ಎಲ್ – ಸಿಎಚ್‌ಸಿ, ಐಎಸ್‌ಡಿ ಬೆಂಗಳೂರು.

- Advertisement - 

 

Share This Article
error: Content is protected !!
";