![](https://www.chandravallinews.com/wp-content/uploads/2023/01/images-9.jpg)
i
ಅವಧಿ ಮೀರಿದ ಗ್ರಾಹಕ ವ್ಯಾಜ್ಯಗಳ ಕಡತಗಳ ನಾಶ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕಾವೇರಿ ಭವನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 2001 ರಿಂದ 2003ನೇ ಇಸವಿಯವರೆಗೆ ದೂರುಗಳು ದಾಖಲಾಗಿ ಇತ್ಯರ್ಥಗೊಂಡಿರುವ ಗ್ರಾಹಕ ವ್ಯಾಜ್ಯಗಳ ದೂರುಗಳು ಹಾಗೂ ಅಮಲ್ಜಾರಿ ಪ್ರಕರಣಗಳ ಕಡತಗಳನ್ನು ನಾಶಗೊಳಿಸುವ ಸಂಬಂಧ ಕ್ರಮವಹಿಸಲಾಗುತ್ತಿದ್ದು, ಸಂಬಂಧಪಟ್ಟ ಪಕ್ಷಕಾರರು/ವಕೀಲರು ಪ್ರಕರಣಗಳಲ್ಲಿ ಮೂಲ ದಾಖಲೆಗಳನ್ನು ಹಾಜರುಪಡಿಸಿದ್ದಲ್ಲಿ, ಅಂತಹ ಮೂಲ ದಾಖಲೆಗಳನ್ನು 20ನೇ ಜನವರಿ 2023ರೊಳಗಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾವೇರಿ ಭವನ, 8ನೇ ಮಹಡಿ, ಜಲಮಂಡಳಿ ಕಟ್ಟಡ, ಕಛೇರಿಯಲ್ಲಿ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಿ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲವಾದಲ್ಲಿ ಅಂತಹ ದಾಖಲೆಗಳನ್ನು ನಾಶಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.