![](https://www.chandravallinews.com/wp-content/uploads/2023/01/WhatsApp-Image-2023-01-16-at-7.21.23-PM.jpeg)
i
ಜ.18 ರಂದು ಕಣಿವೆ ಆಂಜನೇಯ ಸ್ವಾಮಿ ಶಿಖರ ಪ್ರತಿಷ್ಠಾಪನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುಂಚಿಗನಾಳ ಕಣಿವೆಯ ಶ್ರೀ ಕಣಿವೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ನೂತನವಾಗಿ ನಿರ್ಮಿಸಿರುವ ಗೋಪುರದ ಶಿಖರ ಪ್ರತಿಷ್ಠಾಪನೆ ಹಾಗೂ ಅವಧೂತ ಸದ್ಗುರು ಶ್ರೀ ಬಿಂದುಮಾಧವ ಸ್ವಾಮೀಜಿಯವರ ನೂತನ ಅಮೃತ ಶಿಲಾ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯವನ್ನು ಜ.18ರ ಬುದುವಾರ ಬೆಳಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಹೊಸದುರ್ಗದ ಬೆಲಗೂರು ಶ್ರೀ ಮಾರುತಿ ಗುರುಪೀಠ ಪೀಠಾಧಿಪತಿ ಶ್ರೀ ವಿಜಯ ಮಾರುತಿ ಶರ್ಮ ಗುರುಗಳು ನೂತನ ಅಮೃತ ಶಿಲಾ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಲಿದ್ದಾರೆ. ನಿವೃತ್ತ ಅಬಕಾರಿ ಅಧೀಕ್ಷಕಿ ಟಿ. ಮಂಜುಳಮ್ಮ ಅಧ್ಯಕ್ಷತೆ ವಹಿಸಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ ಕೃಷ್ಣಮೂರ್ತಿ, ರತ್ನಮ್ಮ ಕಾಂತರಾಜ್, ಉಪಾಧ್ಯ ಗ್ರೂಪ್ ಆಫ್ ಹೋಟೆಲ್ ಮಾಲೀಕ ದೀಪಕ್, ಇಂಜಿನಿಯರ್ ಕಲ್ಯಾಣಮ್ಮ ಗಂಗಲಕಯ್ಯ, ಮದಕರಿ ವಿದ್ಯಾ ಸಂಸ್ಥೆ ಅಧ್ಯಕ್ಷೆ ದಿವ್ಯ ಸರಸ್ವತಿ ಸಂದೀಪ್, ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ತಿಪ್ಪೇರುದ್ರಮ್ಮ ಡಾ. ಪಾಲಾಕ್ಷಪ್ಪ, ವಲಯ ಅರಣ್ಯ ಅಧಿಕಾರಿ ಕೋಮಲ ಸಂದೀಪ್ ನಾಯಕ್, ನಗರಸಭೆ ಸದಸ್ಯ ದೀಪಕ್, ಬಿಜೆಪಿ ಮಾಜಿ ಅಧ್ಯಕ್ಷ ನರೇಂದ್ರನಾಥ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹನುಮಂತೇಗೌಡ, ಐಶ್ವರ್ಯ ಗ್ರೂಪ್ ಆಫ್ ಹೋಟೆಲ್ ಅರುಣ್, ಅರುಣ್, ಕಿರಣ್, ಮಾಜಿ ನಗರಸಭೆ ಸದಸ್ಯ ಪ್ರವೀಣ್, ಕುಂಚಿಗನಾಳ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿರುವಲಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಬೋರಮ್ಮ ನಾಗಭೂಷಣ್ ಭಾಗವಹಿಸಲಿದ್ದಾರೆ.