i
ಸವಿತಾ, ಅನುಸೂಯಮ್ಮ, ಸಂತೋಷ್ ಮೂರು ವ್ಯಕ್ತಿಗಳು ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೂವರು ವ್ಯಕ್ತಿಗಳು ಕಾಣೆಯಾದ ಕುರಿತು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇಸಾಮುದ್ರ ಗ್ರಾಮದ ಸಂತೋಷ್ ತಂದೆ ಪಾಂಡುನಾಯ್ಕ (ಸು.38ವರ್ಷ) ಕಾಣೆಯಾದ ಕುರಿತು 2022 ನವೆಂಬರ್ 25 ರಂದು ಪ್ರಕರಣ ದಾಖಲಾಗಿದೆ. ಸಂತೋಷ್ 5.2 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಭರಮಸಾಗರ ಗೊಲ್ಲರಹಟ್ಟಿ ಗ್ರಾಮದ ಅನುಸೂಯಮ್ಮ ಗಂಡ ಲೇಟ್ ಬಿ.ಎನ್.ತಿಪ್ಪೇಸ್ವಾಮಿ (ಸು.52 ವರ್ಷ) ಕಾಣೆಯಾದ ಕುರಿತು 2023 ಆಗಸ್ಟ್ 12 ರಂದು ಪ್ರಕರಣ ದಾಖಲಾಗಿದೆ. ಅನುಸೂಯಮ್ಮ 4.8 ಅಡಿ ಎತ್ತರ, ಕೋಲು ಮುಖ ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು ಕನ್ನಡ ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ಹಳದಿ ಬಣ್ಣದ ರವಿಕೆ ಧರಿಸಿರುತ್ತಾರೆ.
ಕ್ಯಾಸಪುರ ಗ್ರಾಮದ ಸವಿತಾ ಗಂಡ ಲೇ.ವಾಸು (ಸು.32ವರ್ಷ) ಕಾಣೆಯಾದ ಕುರಿತು 2023 ಡಿಸೆಂಬರ್ 19 ರಂದು ಪ್ರಕರಣ ದಾಖಲಾಗಿದೆ. ಸವಿತಾ 4.5 ಅಡಿ ಎತ್ತರ, ಕೋಲು ಮುಖ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ಜಾಕೇಟ್ ಧರಿಸಿರುತ್ತಾರೆ.
ಈ ಮೇಲ್ಕಂಡ ವ್ಯಕ್ತಿಗಳ ಕುರಿತು ಮಾಹಿತಿ ತಿಳಿದು ಬಂದಲ್ಲಿ ಭರಮಸಾಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-258421, 9480803163, ಚಿತ್ರದುರ್ಗ ಕಂಟ್ರೋಲ್ ರೂಂ ಸಂಖ್ಯೆ 089194-222782, 08194-10 ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.