i
ನಿರುಪಯುಕ್ತ ಅರಣ್ಯ ಇಲಾಖಾ ವಾಹನಗಳ ಟೆಂಡರ್ ಕಂ ಹರಾಜು
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಯಲ್ಲಾಪುರ ಅರಣ್ಯ ವಿಭಾಗದಲ್ಲಿ ನಿರುಪಯುಕ್ತ ಇಲಾಖಾ ವಾಹನಗಳಾದ ವಲಯ ಅರಣ್ಯಾಧಿಕಾರಿ ಮುಂಡಗೋಡದ ಮಹೀಂದ್ರ ಜೀಪ್ ಮತ್ತು ಯಲ್ಲಾಪುರ ವಲಯ ಅರಣ್ಯಾಧಿಕಾರಿ ಕಚೇರಿಯ ಮಹೀಂದ್ರ ಜೀಪ್ ವಾಹನಗಳನ್ನು ಯಲ್ಲಾಪುರ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಹಿರಂಗವಾಗಿ ಟೆಂಡರ್ ಕಂ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು.
ಸದರಿವಾಹನಗಳನ್ನು ಇದ್ದ ಸ್ಥಳದಲ್ಲಿಯೇ ಯಾವ ಸ್ಥಿತಿಯಲ್ಲಿ ಇವೆಯೋ ಅದೇ ಸ್ಥಿತಿಯಲ್ಲಿ ಹರಾಜು ಮಾಡಲಾಗುವುದು. ಆಸಕ್ತಿಯುಳ್ಳವರು ಸದರಿ ಟೆಂಡರ್ ಕಂ ಹರಾಜಿನಲ್ಲಿ ಭಾಗವಹಿಸಿ ವಾಹನಗಳನ್ನು ಪಡೆದುಕೊಳ್ಳಬಹುದಾಗಿದೆ. ಟೆಂಡರ್ ಭದ್ರತಾ ಠೇವಣಿ ರೂ. 10,000 ಇಡಬೇಕಾಗುತ್ತದೆ. ಟೆಂಡರ್ ಕಮ್ ಹರಾಜನ್ನು ಜೂನ್ 28 ರಂದು ಕರೆಯಲಾಗಿದ್ದು, ಅದೇ ದಿನ ಮಧ್ಯಾಹ್ನ 3 ಗಂಟೆÉಗೆ ಮೊದಲು ಸವಾಲನ್ನು ಮಾಡಿ ನಂತರ ಟೆಂಡರುಗಳನ್ನು ತೆರೆಯಲಾಗುವುದು. ಟೆಂಡರ್ನ್ನು ಜೂನ್ 28 ರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸ್ವೀಕರಿಸಲಾಗುವುದು. ಭದ್ರತಾ ಠೇವಣಿಯನ್ನು ಅದೇ ದಿನ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸ್ವೀಕರಿಸಲಾಗುವುದು.
ಒಂದೊಮ್ಮೆ ಸದರಿ ದಿನದಂದು ಹರಾಜು ನಡೆಯದೇ ಬಾಕಿ ಉಳಿದಲ್ಲಿ ವಾಹನಗಳನ್ನು ಮೂಲ ಷರತ್ತುಗಳಲ್ಲಿ ಯಾವ ಬದಲಾವಣೆಗಳೂ ಇಲ್ಲದೇ ಪುನಃ ಜುಲೈ 9 ರಂದು ಮಧ್ಯಾಹ್ನ 3 ಗಂಟೆಗೆ ಮೊದಲು ಸವಾಲನ್ನು ಮಾಡಿ ನಂತರ ಟೆಂಡರುಗಳನ್ನು ತೆರೆಯಲಾಗುವುದು.
ಟೆಂಡರ್ ಕಮ್ ಸವಾಲನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಯಲ್ಲಾಪುರ ವಿಭಾಗ, ಯಲ್ಲಾಪುರ ರವರು ಸದರಿ ದಿನಾಂಕದಂದು ಖುದ್ದಾಗಿ ಅಥವಾ ಅವರಿಂದ ಅಧಿಕಾರವನ್ನು ಪಡೆದಂತಹ ಅಧಿಕಾರಿಗಳು ಯಲ್ಲಾಪುರ ವಿಭಾಗೀಯ ಕಚೇರಿಯಲ್ಲಿ ನೆರವೇರಿಸುವರು.
ಖರೀದಿದಾರರು ಸವಾಲಿನಲ್ಲಿ ಭಾಗವಹಿಸಿ ತಮ್ಮ ಅತೀ ಹೆಚ್ಚಿನ ಬೇಡಿಕೆಗಳನ್ನು ನೀಡಬಹುದು, ಅಥವಾ ಟೆಂಡರನಲ್ಲಿಯೂ ಸಹ ಭಾಗವಹಿಸಿ ತಮ್ಮ ಬೇಡಿಕೆ ನೀಡಬಹುದಾಗಿದೆ. ಹೀಗೆ ನೀಡಲಾದ ಬೇಡಿಕೆಗಳಲ್ಲಿ ಯಾವುದು ಹೆಚ್ಚು ಅದನ್ನು ಮಾತ್ರ ಪರಿಗಣಿಸಲಾಗುವುದು ಎಂದು ಯಲ್ಲಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.