i
ಹೆಚ್ಐವಿ ಸೋಂಕು ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತದೆ; ಡಾ.ಶೈಲಜಾ ಪಾಟೀಲ್
ಚಂದ್ರವಳ್ಳಿ ನ್ಯೂಸ್, ಹರಿಹರ:
ಎಚ್ಐವಿ ಸೋಂಕು ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಸೂಚಿಸುತ್ತದೆ ಎಂದು ಸರ್ಕಾರಿ ಸಾರ್ವಜನಿಕ ಅಸ್ಪತ್ರೆಯ ವ್ಯದ್ಯೆ ಹಾಗು ಅಪ್ತ ಸಮಾಲೋಚಕಿ ಡಾ.ಶೈಲಜಾ ಪಾಟೀಲ್ ರವರು ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ಕ್ರಾಸ್ ಸಮಿತಿ ಮತ್ತು ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಹೆಚ್.ಐ.ವಿ/ಏಡ್ಸ್ ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್.ಐ.ವಿ. ಎಂಬ ವೈರಾಣುವಿನಿಂದ ಬರುವ ಏಡ್ಸ್ ರೋಗದಿಂದಾಗಿ ಮನುಷ್ಯನ ರೋಗ ನಿರೋಧಕ ಶಕ್ತಿ ಕಡಿಮೆ ಯಾಗುತ್ತದೆ ಎಂದು ಹೇಳಿದರು.
ಈ ರೋಗವು ಹರಡಲು ಪ್ರಮುಖ ನಾಲ್ಕು ಕಾರಣಗಳಿವೆ ಇದರ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು.ಏಡ್ಸ್ ಸೋಂಕಿತರಿಗೆ ರಕ್ತ ನೀಡುವುದರಿಂದ ಅಥವಾ ಪಡೆಯುವುದರಿಂದ,ಅಸುರಕ್ಷಿತ ಸೂಜಿ /ಸಿರಂಜು ಬಳಕೆ, ಸೋಂಕಿತ ತಾಯಿಯ ಎದೆಹಾಲು ಮಗವು ಸೇವಿಸುವುದರಿಂದ ಹಾಗೂ ಅಸುರಕ್ಷಿತ ಲೈಂಗಿಕ ಸಂಬoಧಗಳಿoದ ಈ ರೋಗಾಣು ಹರಡುತ್ತದೆ.ಸೋಂಕಿತರನ್ನು ಮಾತನಾಡಿಸುವುದ ರಿಂದ, ಕೈಕುಲುಕುವುದರಿಂದ, ಜೊತೆಯಲ್ಲಿರುವುದರಿಂದ ಈ ರೋಗ ಹರಡುವ ಸಾಧ್ಯತೆ ಇಲ್ಲ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಅರೋಗ್ಯ ಇಲಾಖೆಯ ಇತ್ತಿಚೀನ ಅವಲೋಕನದ ಪ್ರಕಾರ ಹೆಚ್.ಐ.ವಿ ವೈರಾಣುವಿಗೆ ಯುವಕರು ಹೆಚ್ಚು ತುತ್ತಾಗುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಯುವಕರು ಜಾಗರೂಕರಾಗಬೇಕು ಹಾಗು ಸಮಾಜದ ಪ್ರತಿಯೊಬ್ಬರಿಗೂ ವೈರಾಣು ಮತ್ತು ರೋಗದ ಬಗ್ಗೆ ಜಾಗೃತಿ ಮೂಡಿಸವ ಕೆಲಸವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಏಡ್ಸ್ ರೋಗವನ್ನು ಸಂಪೂರ್ಣವಾಗಿ ವಾಸಿ ಮಾಡಲಾಗದು. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಎ.ಆರ್.ಟಿ ಕೇಂದ್ರದಲ್ಲಿ ಉಚಿತ ಔಷಧ ನೀಡಲಾಗುವುದು.ಯಾವುದೋ ಕಾರಣಕ್ಕೋ ಅಥವಾ ಸ್ವಯಂ ತಪ್ಪಿನಿಂದಲೋ ಬರುವ ಈ ರೋಗದ ಸೋಂಕಿತರಿಗೆ ಸರ್ಕಾರವು ಪ್ರತಿ ತಿಂಗಳು ಅರ್ಥಿಕ ಸಹಾಯ, ಆಶ್ರಯ ಮನೆ ಜೊತೆಗೆ ಇನ್ನು ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ವಿರುಪಾಕ್ಷಪ್ಪ ಹಾಗೂ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕ ಡಾ.ಯತೀಶ್ ಎಲ್.ಕೋಡಾವತ್ ಮುಂತಾದವರು ಮಾತನಾಡಿದರು. ಈ ಸಮಯದಲ್ಲಿ ಬಹಳಷ್ಟು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಉಚಿತ ರಕ್ತ ಪರೀಕ್ಷೆ ನಡೆಸಲಾಯಿತು.ಇದೇ ವೇಳೆ ಏಡ್ಸ್ ರೋಗದ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಗೌರವಧನ ಮತ್ತು ಪ್ರಶಸ್ತಿ ವಿತರಣೆ ಮಾಡಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥರು, ಸಹ ಪ್ರಾಧ್ಯಾಪಕಿ ಡಾ.ಗೌರಮ್ಮ ಎಸ್.ಎಂ ಅವರು, ಅಧ್ಯಾಪಕ ಡಾ.ಎಸ್.ಆರ್.ಮಾಲತೇಶ್, ಸರ್ಕಾರಿ ಆಸ್ಪತ್ರೆಯ ತಾಂತ್ರಿಕ ತಜ್ಞರಾದ ಟಿಪ್ಪುಸುಲ್ತಾನ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಅರ್ಪಿತ ಪ್ರಾರ್ಥಿಸಿದರು, ರೆಡ್ಕ್ರಾಸ್ ಸಮಿತಿ ಸಂಯೋಜಕ ಡಾ.ಅನಂತ ನಾಗ್.ಹೆಚ್.ಪಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿ ನಾಗವೇಣಿ ಪಿ.ಬಿ, ಪ್ರಜ್ವಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಚೈತ್ರಾ ಎಂ.ಎಸ್ ವಂದಿಸಿದರು.