![](https://www.chandravallinews.com/wp-content/uploads/2024/06/WhatsApp-Image-2024-06-27-at-6.22.22-PM-1024x323.jpeg)
i
ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ನೀಡಲಾಯಿತು..
ಚಂದ್ರವಳ್ಳಿ ನ್ಯೂಸ್, ತುಮಕೂರು:
ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕೆಂಪೇಗೌಡರ ಸಾಧನೆ ಕುರಿತು ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಗಳನ್ನು ನೀಡಲಾಯಿತು. ಬಹುಮಾನ ವಿಜೇತರುಃ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಬೆಳ್ಳಾವಿ ಮೇಘನ ಸಿ.ಎಸ್., ದೇವರಾಯಪಟ್ಟಣದ ಎಸ್. ವೈಷ್ಣವಿ, ಅಂತರಸನಹಳ್ಳಿಯ ಎ. ಯಶಸ್ವಿನಿ; ಚಿತ್ರಕಲಾ ಸ್ಪರ್ಧೆಯಲ್ಲಿ ದೇವರಾಯಪಟ್ಟಣದ ದೃತೀನ್, ಚಿಕ್ಕತೊಟ್ಟುಕೆರೆಯ ಎನ್.ಆರ್. ವಿಶಾಲ್., ಬೆಳ್ಳಾವಿಯ ಕೆ.ಪಿ.ಎಸ್ ಶಾಲೆಯ ತೇಜಸ್ವಿನಿ ಆರ್.ಸಿ.; ಭಾಷಣ / ಚರ್ಚಾ ಸ್ಪರ್ಧೆಯಲ್ಲಿ ದೇವರಾಯಪಟ್ಟಣ ವಿದ್ಯಾ ಆಂಗ್ಲ ಶಾಲೆಯ ಅಕ್ಷತ ಎನ್., ಚಿಕ್ಕತೊಟ್ಟುಕೆರೆಯ ಸ.ಮಾ.ಹಿ.ಪ್ರಾ.ಶಾಲೆಯ ಸಿ.ವಿ.ಲಕ್ಷ್ಮಿ, ಮೆಳೇಕೋಟೆ ಆಲಿಯಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳಿಸಿದ್ದಾರೆ.ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಕೆ.ಪಿ.ಎಸ್. ಎಂಪ್ರೆಸ್ ಶಾಲೆಯ ಉಮಾದೇವಿ ಹೆಚ್ ಆರ್. ಪ್ರಥಮ, ದೇವರಾಯಪಟ್ಟಣ ವಿದ್ಯಾ ಆಂಗ್ಲ ಶಾಲೆ ಹಂಸಿನಿ ಜೆ. ದ್ವಿತೀಯ, ಬೆಳ್ಳಾವಿ ಕೆ.ಪಿ.ಎಸ್. ದೊಡ್ಡತಾಯಮ್ಮ ಎಸ್.ಆರ್. ತೃತೀಯ; ಚಿತ್ರಕಲಾ ಸ್ಪರ್ಧೆಯಲ್ಲಿ ಗಾಂಧಿನಗರ ಸೆಂಟ್ ಮೇರಿಸ್ ಪ್ರೌಢಶಾಲೆಯ ತೆಹರಾ ತಬಸ್ಸುಮ್., ರಾಘವೇಂದ್ರನಗರ ನಳಂದ ಪ್ರೌಢಶಾಲೆಯ ಗಗನ್ ಗೌಡ., ಹೊನಸಿಗೆರೆ ಸರ್ಕಾರಿ ಪ್ರೌಢಶಾಲೆ ಪುನೀತ್ ಅವರು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ; ಭಾಷಣ / ಚರ್ಚಾ ಸ್ಪರ್ಧೆಯಲ್ಲಿ ಆರ್ಯನ್ ಪ್ರೌಢಶಾಲೆಯ ಬಿ.ಜೆ. ಯಶಸ್ವಿನಿ. ಮೊದಲ, ಕೆ.ಪಿ.ಎಸ್. ಎಂಪ್ರೆಸ್ ಶಾಲಯ ಐಶ್ವರ್ಯ ಜೆ. ದ್ವಿತೀಯ, ಬೆಳ್ಳಾವಿ ಕೆ.ಪಿ.ಎಸ್ ಶಾಲೆಯ ಯಶಸ್ವಿನಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಜಮುನ (ದ್ವಿತೀಯ ಪಿಯುಸಿ), ಭಾರತಿ (ದ್ವಿತೀಯ ಪಿಯುಸಿ), ಉಷಾ ಎನ್.ಎಂ (ಪ್ರಥಮ ಪಿ.ಯು.ಸಿ); ಚಿತ್ರಕಲಾ ಸ್ಪರ್ಧೆಯಲ್ಲಿ ಸಿಂಚನಾ ಆರ್ (ಪ್ರಥಮ ಪಿ.ಯು.ಸಿ), ಶಿಲ್ಪ ಹೆಚ್.ಕೆ. (ದ್ವಿತೀಯ ಪಿಯುಸಿ), ಶಾಫಿಯಾ ಖಾನಂ (ದ್ವಿತೀಯ ಪಿಯುಸಿ) ಅವರು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದು ಭಾಷಣ / ಚರ್ಚಾ ಸ್ಪರ್ಧೆಯಲ್ಲಿ ತ್ರಿವೇಣಿ (ದ್ವಿತೀಯ ಪಿಯುಸಿ) ಪ್ರಥಮ ಹಾಗೂ ತಿಮ್ಮೇಗೌಡ (ದ್ವಿತೀಯ ಪಿಯುಸಿ) ದ್ವಿತೀಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.