![](https://www.chandravallinews.com/wp-content/uploads/2024/06/WhatsApp-Image-2024-06-26-at-7.58.48-PM-1.jpeg)
i
ಕೆರೆಕಟ್ಟೆ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ
ಚಂದ್ರವಳ್ಳಿ ನ್ಯೂಸ್, ಶಿಕಾರಿಪುರ :
ಪುರಸಭೆ ವ್ಯಾಪ್ತಿಯ ಅನೇಕ ಕೆರೆಕಟ್ಟೆಗಳು ಅಕ್ರಮವಾಗಿ ಒತ್ತುವರಿಯಾಗಿದ್ದು, ತೆರವುಗೊಳಿಸಲು ವಿವಿಧ ಸಂಘಟನೆಗಳಿಂದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನೇತೃತ್ವ ವಹಿಸಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಯುವರಾಜ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯ ಮೌಲ್ಯದ ಸರ್ಕಾರಿ ಜಾಗಗಳು ಅಕ್ರಮವಾಗಿ ಒತ್ತುವರಿಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕೂಡಲೇ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು
ಪಟ್ಟಣದಲ್ಲಿ ಹಲವಾರು ಸರ್ಕಾರಿ ಕೆರೆಗಳು ಸಂಪೂರ್ಣವಾಗಿ ಒತ್ತುವರಿಯಾಗಿದ್ದು, ಈ ಒತ್ತುವರಿ ಜಾಗದಲ್ಲಿ ವಾಣಿಜ್ಯ ಮಳಿಗೆಗಳು, ಶಾಲಾಕಾಲೇಜುಗಳು, ಸೇರಿದಂತೆ ಹಲವಾರು ಕಟ್ಟಡಗಳು ನಿರ್ಮಿತವಾಗಿದ್ದು ಇದಕ್ಕೆ ಪುರಸಭೆಯಿಂದ ನಕಲು ದಾಖಲೆಗಳನ್ನು ಸೃಷ್ಟಿಸಿ ಖಾಸಗಿಯವರಿಗೆ ಹಂಚಲಾಗಿದೆ. ತಾಲ್ಲೂಕಿನ ಕಸಬಾ ಕಸಬಾ ಹೋಬಳಿ ಕಾನೂರು ಗ್ರಾಮದ ಸರ್ವೇ ನಂಬರ್ ೧೪೫ ರಲ್ಲಿ ವಡ್ಡನಕಟ್ಟೆ ಕೆರೆಯು ಸರ್ಕಾರಿ ಕೆರೆಯಾಗಿದ್ದು, ಇದು ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು ಇದರ ವಿಸ್ತೀರ್ಣ ೧೨ ಎಕರೆ ೨೦ ಗುಂಟೆ ಇದ್ದು ಕೆಲವು ವರ್ಷಗಳಿಂದ ಭೂಗಳರು ಒತ್ತುವರಿ ಮಾಡಿದ್ದಾರೆ. ಕೆರೆಯನ್ನು ಅಕ್ರಮವಾಗಿ ಸಮತಟ್ಟಾಗಿ ಲೇಔಟ್ ಮಾಡಲಾಗಿದ್ದು ಅಲ್ಲದೆ ಕಟ್ಟಡದ ನಿರ್ಮಾಣ ಮಾಡಿ ಈ ಸ್ವತ್ತು ಸಹ ನೀಡಲಾಗಿದೆ ಎಂದರು.
ಈ ಲೇಔಟ್ ನಲ್ಲಿ ಸಾರ್ವಜನಿಕ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಕೆಲವು ವರ್ಷಗಳ ಹಿಂದೆ ವಿವಿಧ ಸಂಘಟನೆ ಹಾಗೂ ಸಾರ್ವಜನಿಕರ ತೀವ್ರ ಹೋರಾಟದಿಂದ ಪ್ರತಿಫಲವಾಗಿ ಕಡುಬಡವರ ಸಣ್ಣ ಪುಟ್ಟ ಮನೆಗಳನ್ನು ಮಾತ್ರ ಆಡಳಿತ ಮಂಡಳಿಯವರು ತೆರವುಗೊಳಿಸಿದ್ದಾರೆ. ಇನ್ನುಳಿದಂತೆ ಉಳ್ಳವರ ಮನೆಗಳನ್ನು ಹಾಗೆಯೇ ಬಿಡಲಾಗಿದೆ. ಇಲ್ಲಿ ನಿರ್ಮಿಸಿರುವ ಶ್ರೀಮಂತರ ಕಟ್ಟಡಗಳಿಗೆ ಪರವಾನಿಗೆ ನೀಡಿದ್ದು ಸುಮಾರು ಏಳೆಂಟು ಎಕರೆ ಭೂಮಿಯನ್ನು ಒತ್ತ್ತುವರಿ ಮಾಡಲಾಗಿದೆ ಕರ್ನಾಟಕ ಭೂಗಂದಾಯ ಕಾಯ್ದೆ ೧೯೬೪ರ ಕಾಲಂ ೧೯೨ಚಿ ಅಡಿಯಲ್ಲಿ ಪುರಸಭೆ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಘಟನೆ, ಜಯ ಕರ್ನಾಟಕ ಸಂಘಟನೆ ಹಾಗೂ ಗೆಳೆಯರ ಬಳಗ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಎಉತ್ತದೆ ಎಂದರು.
ಈ ಸಂದರ್ಭದಲ್ಲಿ ಐ ಹೆಚ್ ಆರ್ ಸಿ ಸಿ ಓ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಆಯಿಷಾ ,ಜೈ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮಂಜುನಾಥ್, ಗೆಳೆಯರ ಬಳಗದ ಅಬ್ದುಲ್ ಜಬ್ಬ್ಬಾರ್ ಸಾಬ್, ಇಮ್ತಿಯಾಜ್, ಚಂದ್ರಶೇಖರ್, ಫಕೀರಪ್ಪ, ರುದ್ರಪ್ಪ, ನಾಗರಾಜ್ ನಾಯ್ಕ್, ಸುರೇಶ ನಾಯ್ಕ್ ಹಾಜರಿದ್ದರು.