![](https://www.chandravallinews.com/wp-content/uploads/2024/06/WhatsApp-Image-2024-06-26-at-3.20.03-PM-1024x899.jpeg)
i
ನಾಡಪ್ರಭುಗಳ ಆಳ್ವಿಕೆ ಅಜರಾಮರ-ರಘುಗೌಡ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡಪ್ರಭು ಕೆಂಪೇಗೌಡರ ಜಯಂತಿ ಜೂನ್ 27ರಂದು ಗುರುವಾರ ಆಚರಿಸಲಾಗುತ್ತದೆ. ಈ ದಿನದಲ್ಲಿ ಕೆಂಪೇಗೌಡರ ಗತವೈಭವವದ ಆಳ್ವಿಕೆಯನ್ನು ಸ್ಮರಿಸೋಣ. ಯಲಹಂಕ ಪ್ರಾಂತ್ಯದ ಕೆಂಪೇಗೌಡರು ಬೆಂಗಳೂರು ಸಂಸ್ಥಾಪಕರು. ಇವರ ಪಾಳೆಗಾರಿಕೆ ಆಡಳಿತದಲ್ಲಿ ಹಲವಾರು ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದರು. ಬೆಂಗಳೂರಿನಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಕೃಷಿ ಬದುಕಿನ ಪರವಾಗಿ ಅನೇಕ ಕೆರೆ ಕಟ್ಟೆಗಳನ್ನು ಕಟ್ಟಿದ್ದಾರೆ ಹಾಗೂ ಆ ದಿನಮಾನಗಳಲ್ಲಿಯೇ ವ್ಯಾಪಾರಿ ನೀತಿಯನ್ನು ಉತ್ತೇಜಿಸಲು ಹಲವು ಪ್ರತ್ಯೇಕ ಸೌಲಭ್ಯಗಳಲ್ಲಿ ವಾಣಿಜ್ಯ ಪೆಟ್ಟಿಗೆಗಳನ್ನು ನಿರ್ಮಿಸಿದ್ದರು.ಒಕ್ಕಲುತನದ ಕೃಷಿ ಕುಟುಂಬಕ್ಕೆ ಸೇರಿದ ಕೆಂಪೇಗೌಡರು ಕಲೆಯ ಕಲಿಕೆಗೆ ಹೆಚ್ಚಿನದಾಗಿ ಪ್ರೋತ್ಸಾಹಿಸಿದ್ದಾರೆ. ಅವರು ಬಹುಭಾಷಾ ಪಂಡಿತರು ಹೌದು. ಬೆಂಗಳೂರನ್ನು ಸರ್ವಜನಾಂಗದ ಹಿತದೃಷ್ಟಿಯಿಂದ ಕಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಗುಡ್ಡೆಯಾಗಿ ಇತಿಹಾಸ ಪುಟಗಳು ತಿಳಿಸುತ್ತವೆ. ಸುಮಾರು 500 ವರ್ಷಗಳ ಹಿಂದೆಯೇ ಬೆಂಗಳೂರಿನ ಈಗಿನ ಚಿಕ್ಕಪೇಟೆಯನ್ನು ಮಧ್ಯಭಾಗವಾಗಿ ಮಾಡಿಕೊಂಡ ಕೆಂಪೇಗೌಡರು ನಾಲ್ಕು ಜೊತೆ ಎತ್ತುಗಳಿಗೆ ನೇಗಿಲು ಕಟ್ಟಿ ನಾಲ್ಕು ದಿಕ್ಕುಗಳಿಗೆ ಬಿಡಲಾಗಿದೆ. ಕೊನೆಯದಾಗಿ ಎತ್ತುಗಳು ನಿಂತ ಸ್ಥಳಗಳನ್ನು ಗಡಿ ಭಾಗವೆಂದು ಗುರುತಿಸಿಕೊಂಡು ಆ ನಾಲ್ಕು ದಿಕ್ಕುಗಳಿಗೂ ಗಡಿ ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. ಆ ನಾಲ್ಕು ಗಡಿ ದಿಕ್ಕುಗಳ ಪರಿಪೂರ್ಣನೋಟ ವೃತ್ತಾಕಾರವಾಗಿ ಕಂಡುಬಂದಿದೆ. ಈ ವಿಚಾರ ಪವಾಡದ ವಿಸ್ಮಯಕಾರಿ ರೀತಿಯಲ್ಲಿ ಗೋಚರಿಸಿದೆ. ಈ ಕಾಲಘಟ್ಟದಲ್ಲಿಯು ಆ ಗಡಿ ಗೋಪುರಗಳು ಸದೃಢವಾಗಿ ಕಂಡುಬರುತ್ತವೆ. ದೇಶದ ಐತಿಹಾಸಿಕ ಇತಿಹಾಸದಲ್ಲಿ ನಾಡಪ್ರಭು ಎಂಬ ಘನತೆಯ ಬಿರುದನ್ನು ಪಡೆದಿರುವ ಏಕೈಕ ದೊರೆ ಕೆಂಪೇಗೌಡರು. ಈ ಒಂದು ಮಹತ್ವದ ಗೌರವ ರಾಜ್ಯದ ಜನತೆಗೆ ಹೆಮ್ಮೆಯ ವಿಚಾರ.ಕೆಂಪೇಗೌಡರ ಸಾರ್ವಭೌಮತ್ವದ ಹಲವಾರು ವಿಷಯಗಳು ಈ ಕಾಲಮಾನದ ಜನಪ್ರತಿನಿಧಿಗಳಿಗೆ ಮಾರ್ಗದರ್ಶನದ ಪಾಠವಾಗಿದೆ.
ಸಾರ್ವಜನಿಕ ಕ್ರಿಯಾಶೀಲ ಬದುಕು ಶಾಶ್ವತವಾಗಿ ಜೀವಿಸುತ್ತದೆ ಎಂಬುದಕ್ಕೆ ಸಾಕ್ಷಿ ಗುಡ್ಡೆ ಕೆಂಪೇಗೌಡರ ಆಡಳಿತ. ಪ್ರಜಾನೀತಿಯ ಈ ಯುಗದಲ್ಲಿ ಜನಪ್ರತಿನಿಧಿ ಸ್ಥಾನವನ್ನು ಪಡೆಯುವುದು ಪೂರ್ವಜನ್ಮದ ಪುಣ್ಯದ ಫಲದಿಂದ. ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಜನಪರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದೇ ಪ್ರಜಾನಿತಿಯ ಸಿದ್ದಾಂತ. ತುಮಕೂರು ಹಾಗೂ ಚಿತ್ರದುರ್ಗ ಈ ಎರಡು ಜಿಲ್ಲಾ ಕೇಂದ್ರಗಳಲ್ಲಿಯೂ ಹಾಗೂ ಈ ಎರಡು ಜಿಲ್ಲೆಯಲ್ಲಿ ಬರುವ ಎಲ್ಲಾ ತಾಲ್ಲೂಕು ಕೇಂದ್ರಗಳು ಸೇರಿದಂತೆ ಪ್ರತಿಯೊಂದು ಹಳ್ಳಿಗಳಲ್ಲಿಯೂ ಸರ್ವ ಜನಾಂಗದ ವಿಶ್ವಾಸದಲ್ಲಿ ಕೆಂಪೇಗೌಡ ಜಯಂತಿಯನ್ನು ಸೌಜನ್ಯಪೂರಕವಾಗಿ ಆಚರಿಸಲು ಸಂಘ ಸಂಸ್ಥೆಗಳು ಪೂರ್ವಸಿದ್ಧತೆಯಿಂದ ಸನ್ನದ್ಧರಾಗಬೇಕು.ಸರ್ಕಾರಕ್ಕೆ ಮನವಿ- ಕೆಂಪೇಗೌಡರ ಅಭಿವೃದ್ಧಿಯ ಮಾನದಂಡ ಈ ಕಾಲಘಟ್ಟದ ಜನಪ್ರತಿನಿಧಿಗಳಿಗೆ ಆದರ್ಶಪ್ರಾಯ. ಆ ಒಂದು ಮಹತ್ವದ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳ ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಸಹಕಾರ ಕ್ಷೇತ್ರ ಈ ಎರಡು ಕಾರ್ಯಾಲಯಗಳ ಮುಂಭಾಗದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡುವುದು ಉತ್ತಮ ಸಂದೇಶ. ಈ ಸುದ್ದಿಯನ್ನು ಸರ್ಕಾರದ ಗಮನಕ್ಕೆ ತರಲು ಸಂಘ ಸಂಸ್ಥೆಗಳು ಮುಂದಾಗಬೇಕು ಕಾಂಗ್ರೆಸ್ ಮುಖಂಡ ರಘು ಗೌಡ ಇದು ವಿನಯಪೂರ್ವಕವಾಗಿ ಮನವಿ ಮಾಡಿದ್ದಾರೆ.