![](https://www.chandravallinews.com/wp-content/uploads/2024/06/Women--1024x1024.jpeg)
i
ಆಗುಂಬೆ ಘಾಟ್ನಲ್ಲಿ ಭಾರೀ ವಾಹನ ಸಂಚಾರ ನಿಷೇಧ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಆಗುಂಬೆ ಘಾಟ್ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಭಾರೀ ಮಳೆಯಿಂದ ಮತ್ತು ಭಾರೀ ವಾಹನಗಳ ಓಡಾಟದಿಂದ ರಸ್ತೆ ಕುಸಿಯುವ ಸಾಧ್ಯತೆ ಇರುವುದನ್ನು ಮನಗಂಡು ಜೂನ್ ೨೭ರಿಂದ ಸೆ, ೧೫ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರದತ್ ಹೆಗಡೆ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಪೊಲೀಸರ ಮಾಹಿತಿ ಹಿನ್ನೆಲೆಯಲ್ಲಿ ಮತ್ತು ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ವಾಹನ ಸಂಚಾರ ಕಷ್ಟವಾಗಬಹುದು., ರಸ್ತೆ ಬದಿ ಕುಸಿಯಬ ಹುದು ಎನ್ನುವ ಮುನ್ಸೂಚನೆ ಆಧಾರದಲ್ಲಿ ಈ ಆದೇಶ ಹೊರಡಿಸಲಾಗಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ಸಂಚರಿಸುವ ಜಲ್ಲಿ ಲಾರಿಗಳು ಮತ್ತು ಇತರೆ ಸರಕು ಸಾಗಾಟದ ಭಾರಿ ವಾಹನಗಳು ಈ ಮಾರ್ಗದಲ್ಲಿ ಸಂಚರಿಸದಂತೆ ಆದೇಶಿಸಲಾಗಿದೆ. ಈ ವಾಹನಗಳು ಉಡುಪಿಯಿಂದ ಕುಂದಾಪುರ, ಸಿದ್ದಾಪುರ ಮಾಸ್ತಿಕಟ್ಟೆ ಮಾರ್ಗವಾ ತೀರ್ಥಹಳ್ಳಿ ತಲುಪಬೇಕೆಂದು ಸೂಚಿಸಲಾಗಿದೆ.