![](https://www.chandravallinews.com/wp-content/uploads/2024/06/WhatsApp-Image-2024-06-29-at-4.55.10-AM-1024x485.jpeg)
i
6.5ಲಕ್ಷ ವೆಚ್ಚದ ಅಕ್ಕಮಹಾದೇವಿ ತಂಗುದಾಣ ಉದ್ಘಾಟಿಸಿದ ಶಾಸಕ ದೀರಜ್ ಮುನಿರಾಜು…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಬಸವ ಭವನ ಎದುರು ಅಕ್ಕನ ಬಳಗದ ವತಿಯಿಂದ ನೂತನವಾಗಿ ನಿರ್ಮಿಸಿರುವ ಅಕ್ಕಮಹಾದೇವಿ ತಂಗು ನಿಲ್ದಾಣವನ್ನು ಶುಕ್ರವಾರ ಶಾಸಕ ಧೀರಜ್ ಮುನಿರಾಜು ಅವರು ಉದ್ಘಾಟಿಸಿದರು.
ಅಕ್ಕನ ಬಳಗ, ವೀರಶೈವ ಲಿಂಗಾಯಿತ ಮಹಿಳಾ ಸಂಘದ ವತಿಯಿಂದ ಅಂದಾಜು 6.5 ಲಕ್ಷ ವೆಚ್ಚದಲ್ಲಿ ಈ ಹೈಟೆಕ್ ತಂಗುದಾಣ ನಿರ್ಮಾಣ ಮಾಡಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ಬಸ್ ನಿಲ್ದಾಣಗಳಿಲ್ಲದೇ ಪ್ರಯಾಣಿಕರು, ವಿದ್ಯಾರ್ಥಿಗಳು ರಸ್ತೆ ಬದಿಯೇ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಅಭಿವೃದ್ಧಿಗಾಗಿ ನಗರಸಭೆ ಆಡಳಿತ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಿರಲಿಲ್ಲ. ಇದನ್ನು ಮನಗಂಡ ಅಕ್ಕನ ಬಳಗದ ಪದಾಧಿಕಾರಿಗಳು ಸಾಮಾಜಿಕ ಕಳಕಳಿಯಿಂದ ಈ ಹೈಟೆಕ್ ಬಸ್ ತಂಗುದಾಣ ನಿರ್ಮಿಸಿದೆ.
2ನೇ ವಾರ್ಡ್ ನಗರಸಭೆ ಸದಸ್ಯ ಪದ್ಮನಾಭ ಅವರು ಬಸ್ ತಂಗುದಾಣದಲ್ಲಿ ಪ್ರಯಾಣಿಕರಿಗೆ ದಿನಪತ್ರಿಕೆ ವ್ಯವಸ್ಥೆ ಮಾಡುಬ ಭರವಸೆ ನೀಡಿದರು. ಈ ತಂಗುದಾಣದಲ್ಲಿ ಸುಮಾರು ನಾಲ್ಕು ಕಾಲೇಜುಗಳ ವಿದ್ಯಾರ್ಥಿಗಳು, ತುಮಕೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಬರುತ್ತಾರೆ. ಬಸ್ ನಿಲ್ದಾಣ ನಿರ್ಮಿಸಿರುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಇಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ದಿನಪತ್ರಿಕೆ ವ್ಯವಸ್ಥೆ ಮಾಡಲಾಗುವುದು ಎಂದು ನಗರಸಬಾ ಸದಸ್ಯ ಎಸ್.ಪದ್ಮನಾಭ ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರುವ ವೃತ್ತ, ಬಸ್ ನಿಲ್ದಾಣದಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಮಾಡುವುದಾಗಿ ಶಾಸಕ ಧೀರಜ್ ಮುನಿರಾಜು ಭರವಸೆ ನೀಡಿದರು.
ಬಸ್ ನಿಲ್ದಾಣ ಉದ್ಘಾಟನೆ ಅಂಗವಾಗಿ ಶಾಸಕರು ಗಿಡ ನೆಟ್ಟು ನೀರೆರೆದರು. ಈ ವೇಳೆ ಅಕ್ಕನ ಬಳಗದ ಕಾರ್ಯದರ್ಶಿ ಮಂಜುಳಾ, ಖಜಾಂಚಿ ಪುಷ್ಪಾ, ನಗರಸಭಾ ಸದಸ್ಯರಾದ ಪದ್ಮನಾಭ, ಬಂತಿ ವೆಂಕಟೇಶ್, ಮುಖಂಡರಾದ ಅಂಜನಮೂರ್ತಿ, ರಮೇಶ್, ಪುಷ್ಪಾ ಶಿವಶಂಕರ್, ಗಗನ್, ಫಣೀಶ್, ಗುತ್ತಿಗೆದಾರ ವಿಜಿತ್ ಇತರರು ಇದ್ದರು.