![](https://www.chandravallinews.com/wp-content/uploads/2024/06/WhatsApp-Image-2024-06-29-at-4.55.12-AM-1024x478.jpeg)
i
ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಓದುಗರ ಕ್ಲಬ್
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅಂಬೇಡ್ಕರ್ ಅವರು ಓದುವ ಎಲ್ಲರಿಗೂ ಸ್ಫೂರ್ತಿ, ಗ್ರಂಥಾಲಯದಲ್ಲಿರುವ ಎಲ್ಲಾ ಪುಸ್ತಕಗಳನ್ನು ಅಧ್ಯಯನ ಮಾಡಿ ಸಮಾಜದ ಜ್ಞಾನಿಗಳಾಗಬೇಕು. ಈ ಉದ್ದೇಶಕ್ಕಾಗಿ ಓದುಗರ ಕ್ಲಬ್ ಸ್ಥಾಪಿಸಿರುವುದು, ಓದುಗರ ಕ್ಲಬ್ ನಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗುತ್ತದೆಂದು ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ ಮಾತನಾಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯದ ಓದುಗರ ಕ್ಲಬ್ ಮತ್ತು ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಓದುಗರ ಕ್ಲಬ್ ಉದ್ಘಾಟನೆಯಲ್ಲಿ ಬುದ್ಧ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಸಮಾಜಕ್ಕೆ ಬುದ್ಧ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಅಂಬೇಡ್ಕರ್ ಅವರು ನಮ್ಮೆಲ್ಲರ ಶಕ್ತಿ. ಇವರ ಕೊಡುಗೆಗಳನ್ನು ಸ್ಮರಿಸಿರದಲ್ಲದೇ, ಪ್ರಸ್ತುತ ದಿನಗಳಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ಗ್ರಂಥಪಾಲಕ ವಿನೋದ್ ಕುಮಾರ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಗುರುಗಳು ನೀಡಿದ ಬುದ್ಧನ ಜೀವನ ಚರಿತ್ರೆ ಪುಸ್ತಕವನ್ನು ಓದಿದ ಮೇಲೆ ಬುದ್ಧನ ಪ್ರಭಾವಕ್ಕೆ ಒಳಗಾಗದರು, ಬುದ್ಧನ ತತ್ವಗಳನ್ನು ಅಳವಡಿಸಿಕೊಂಡು ಇಡೀ ವಿಶ್ವಕ್ಕೆ ಜ್ಞಾನದ ಬೆಳಕನ್ನ ತೋರಿದವರು . ಆಗಾಧ ಜ್ಞಾನವನ್ನು ಹೊಂದಿದ್ದ ಬಾಬಾ ಸಾಹೇಬರು 64 ವಿಷಯಗಳಲ್ಲಿ ಪರಿಣಿತಿಯನ್ನು ಸಾಧಿಸಿ, ಸುಮಾರು ಒಂಬತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ನಿರರ್ಗಳತೆಯನ್ನು ಹೊಂದಿದ್ದರು. ವಿದ್ಯಾರ್ಥಿಗಳು ಅವರನ್ನು ಆದರ್ಶವಾಗಿಟ್ಟುಕೊಂಡು ಗ್ರಂಥಾಲಯದಲ್ಲಿರುವ ಎಲ್ಲಾ ಪುಸ್ತಕಗಳನ್ನು ಹೆಚ್ಚಿನ ರೀತಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಓದುಗರ ಕ್ಲಬ್ ನ ಎಂ.ಹೇಮಂತ್ ಮಾತನಾಡಿ, ಜಗತ್ತಿನ ಮೊದಲ ಬೆಳಕು ಬುದ್ಧ, ಶುದ್ಧೋದನ ಮತ್ತು ಮಹಾಮಾಯೆಯ ಮಗನಾಗಿ ಸರಳವಾಗಿ ತನ್ನನ್ನು ಪರಿಚಯಿಸಿಕೊಂಡ ಬುದ್ಧರ ಬೋಧನೆಗಳನ್ನ ಎಲ್ಲರೂ ಅನುಸರಿಸಬೇಕು. ಶಾಂತಿಯ ಪ್ರತೀಕರಾದ ಬುದ್ಧರ ಮಾರ್ಗದಲ್ಲಿ ನಡೆದ ಬಾಬಾಸಾಹೇಬರು ಆಧುನಿಕ ಭಾರತವನ್ನು ಸದೃಢವಾಗಿ ಕಟ್ಟುವಲ್ಲಿ ದುಡಿದ ಮಹನೀಯರಲ್ಲಿ ಪ್ರಮುಖರು ಎಂದರು.
ಕಾಲೇಜಿನ ಗ್ರಂಥಾಲಯಕ್ಕೆ ಪ್ರೇರಣೆಗಾಗಿ ಪ್ರಾಧ್ಯಾಪಕರಾದ ಉಮೇಶ್ ಬುದ್ಧ ಮತ್ತು ಅಂಬೇಡ್ಕರ್ ರವರ ಭಾವಚಿತ್ರಗಳನ್ನು ಕೊಡುಗೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಸಿದ್ದರಾಮರಾಜು, ಡಾ.ಪ್ರಕಾಶ್ ಮಂಟೇದ, ಡಾ.ಕೆಂಪರಾಜು, ಪ್ರೊ.ನೀರಜಾ ದೇವಿ, ಡಾ.ರಂಗಸ್ವಾಮಿ, ಪ್ರೊ.ಶೈಲಾ, ಓದುಗರ ಕ್ಲಬ್ ನ ಜಿ.ಸಿ.ಮುನಿಕೃಷ್ಣ, ಎಲ್.ಮನೋಜ್ ಕುಮಾರ್, ನಯನ್ ಇದ್ದರು.