![](https://www.chandravallinews.com/wp-content/uploads/2024/06/protest-1024x649.jpeg)
i
ಗ್ರಾಪಂ ಸದಸ್ಯರ ವಿರುದ್ಧ ಪ್ರತಿಭಟನೆ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಕೋಟೆಗಂಗೂರು ಗ್ರಾಮ ಪಂಚಾಯ್ತಿ ಸರ್ವೆ ನಂ. ೧೧೪ರ ೫ ಎಕರೆ ೧೬ ಗುಂಟೆ ಗ್ರಾಮಠಾಣ ಜಾಗವನ್ನು ಪಂಚಾಯ್ತಿ ಸದಸ್ಯರು ಅಕ್ರಮವಾಗಿ ಮಾರಾಟ ಮಾಡಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ಗೆಳೆಯರ ಬಗದ ಜಿಲ್ಲಾ ಘಟಕದಿಂದ ಶುಕ್ರವಾರ ಜಿಪಂ ಕಚೇರಿ ಎದುರು ಪ್ರತಿಭಟನ ನಡೆಸಲಾಯಿತು.
ಕೋಟೆಗಂಗೂರು ಗ್ರಾಮ ಪಂಚಾಯ್ತಿಯ ದೇವಕಾತಿಕೊಪ್ಪ ಅಂಬೇಡ್ಕರ್ ನಗರದಲ್ಲಿ ಜನರಿಂದ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ತಮ್ಮ ಅಧಿಕಾರದ ಅವಧಿಯಲ್ಲಿ ಪಕ್ಷಪಾತವಾಗಿ ತಮಗೆ ಬೇಕಾದಂತಹ ವ್ಯಕ್ತಿಗಳಿಗೆ ಹಣವನ್ನು ತೆಗೆದುಕೊಂಡು ಸರ್ವೆ ನಂಬರ್ ೧೧೪ರಲ್ಲಿ ೫ಎಕರೆ ೧೬ಗುಂಟೆ ಗ್ರಾಮಠಾಣ ನಿವೇಶನಗಳನ್ನು ಮಾರಿಕೊಂಡಿದ್ದಾರೆಂದು ಆರೋಪಿಸಿದರು.
ಇದೇ ಗ್ರಾಮದಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರು ೭೫ ಬಡಕುಟುಂಬಗಳು ವಾಸಿಸಲು ಸ್ವಂತ ಸೂರಿಲ್ಲದೆ ಕಷ್ಟಪಡುತ್ತಿದ್ದಾರೆ. ಈ ವಿಷಯ ಕೆದಕಿದಾಗ ಪಂಚಾಯ್ತಿ ಸದಸ್ಯರು ಮನೆ ಮತ್ತು ನಿವೇಶನ ಇದ್ದ ಕುಟುಂಬಗಳಿಗೆ ಮತ್ತೆ ೨ನೇ ನಿವೇಶನವನ್ನು ನೀಡಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಜಿಪಂ ಸಿಇಓ ಅವರು, ಇದನ್ನು ಪರಿಶೀಲಿಸಿ ೨ ನಿವೇಶನ ಹೊಂದಿರುವವರ ಖಾತೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಈ ಕೃತ್ಯ ಎಸಗಿರುವ ಪಂಚಾಯ್ತಿ ಸದಸ್ಯರಿಗೂ ಮತ್ತು ಇದಕ್ಕೆ ಕುಮ್ಮಕ್ಕು ನೀಡಿದ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ತತಕ್ಷಣ ಕುಟುಂಬಗಳಿಗೆ ನಿವೇಶವ ಮಂಜೂರು ಮಾಡಿ ಮನೆ ಬೀದಿಯಲ್ಲಿ ನಿಂತಿರುವಂತಹ ನಿರ್ಗತಿಕ ಕುಟುಮಬಗಳಿಗೆ ನಿವೇಶನ ಕೊಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳಾದ ಸಾದಿಕ್,ಪಿ.ಪ್ರಶಾಂತ್, ಲಂಕೇಶ್, ಆದರ್ಶ, ಕಲ್ಲೇಶ್ ಮೊದಲಾದವರಿದ್ದರು.