![](https://www.chandravallinews.com/wp-content/uploads/2024/06/WhatsApp-Image-2024-06-29-at-4.55.10-AM-2-1024x680.jpeg)
i
ಭೀಕರ ಅಪಘಾತ, 13 ಮಂದಿ ಸಾವು, ಸಂಜೆ ಅಂತ್ಯಕ್ರಿಯೆ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿಯಾಗಿ ಭಧ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿಯ ಒಂದೇ ಕುಟುಂಬದ ಸದಸ್ಯರು ಮತ್ತು ಸಂಬAಧಿಕರು ಸೇರಿದಂತೆ ೧೩ ಮಂದಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ನಿಂತಿದ್ದ ಲಾರಿಗೆ ಹಿಂದಿನಿAದ ಟಿಟಿ ವಾಹನ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಟಿಟಿ ವಾಹನದಲ್ಲಿದ್ದ ೭ ಮಂದಿ ಮಹಿಳೆಯರು ಸೇರಿದಂತೆ ೧೩ ಜನ ಮೃತಪಟ್ಟಿದ್ದಾರೆ. ಪರಶುರಾಮ್ (೪೫), ಭಾಗ್ಯ (೪೦), ನಾಗೇಶ (೫೦), ವಿಶಾಲಾಕ್ಷಿ (೪೦), ಅರ್ಪಿತಾ (೧೮), ಸುಭದ್ರಾ ಬಾಯಿ (೬೫), ಪುಣ್ಯಾ (೫೦), ಮಂಜುಳಾಬಾಯಿ, ಚಾಲಕ ಆದರ್ಶ (೨೩), ಮಾನಸಾ (೨೪), ರೂಪಾ (೪೦), ಮಂಜುಳಾ (೫೦) ಮೃತಪಟ್ಟವರು.
ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ ೩ ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ.
ಮೃತ ನಾಗೇಶ್ ಎಮ್ಮೆಹಟ್ಟಿ ಗ್ರಾಮದಲ್ಲಿ ಕೃಷಿಕರಾಗಿದ್ದಾರೆ. ನಾಗೇಶ್ ಪತ್ನಿ ವಿಶಾಲಾಕ್ಷಿ ಆಶಾ ಕಾರ್ಯಕರ್ತೆಯಾಗಿದ್ದರು. ಮತ್ತು ಅವರ ಪುತ್ರ ಆದರ್ಶ್ ಹೊಸ ಟಿಟಿ ವಾಹನ ಖರೀದಿಸಿದ್ದರು. ಹೊಸ ಟಿಟಿ ವಾಹನಕ್ಕೆ ಪೂಜೆ ಮಾಡಿಸಲು ಹೋಗಿದ್ದರು ಕಲಬುರಗಿ ಜಿಲ್ಲೆಯ ಚಿಂಚೋಳಿಯ ಮಾಯಮ್ಮ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಸವದತ್ತಿಗೆ ಆಗಮಿಸಿ, ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಮರಳಿ ಊರಿಗೆ ಬರುವಾಗ ಅಪಘಾತ ಸಂಭವಿಸಿದೆ.
ಎಮ್ಮಹಟ್ಟಿಯಲ್ಲಿ ದು:ಖದ ಮಡುವು:
ಎಮ್ಮಹಟ್ಟಿ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಮೃತರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ, ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಗ್ರಾಮದ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಿಂದೂ ರುದ್ರಭೂಮಿ ಅಂತ್ಯಸAಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ. ಸಂಜೆಯ ವೇಳೆಗೆ ಶವ ಗ್ರಾಮಕ್ಕೆ ಬರಲಿದ್ದು, ಸಾರ್ವಜನಿಕ ದರ್ಶನದ ನಂತರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
೧೫ ದಿನದ ಹಿಂದೆ ಅಷ್ಟೇ ಟಿಟಿಯನ್ನು ಖರೀದಿ ಮಾಡಿದ್ದ ಆದರ್ಶ್ ಈ ಹಿನ್ನಲೆಯಲ್ಲಿ ತಂದೆ- ತಾಯಿ ಹಾಗೂ ಕುಟುಂಬಸ್ಥರೊAದಿಗೆ ದೇವರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದನು.
ಮಣ್ಣಾದ ಐ ಎ ಎಸ್ ಕನಸು: ಘಟನೆಯಲ್ಲಿ ಸಾವಿಗೀಡಾಗಿರುವ ಮಾನಸಾ ಹುಟ್ಟಿನಿಂದ ಅಂಧೆಯಾಗಿದ್ದು, ಬೆಂಗಳೂರಿನ ಅಕಾಡೆಮಿಯೊಂದರಲ್ಲಿ ಐಎಎಸ್ಗೆ ಸಿದ್ಧ್ದತೆ ನಡೆಸಿದ್ದಳು. ಪ್ರತಿಭಾನ್ವಿತೆಯಾಗಿದ್ದ ಈಕೆ ಅಂಧರ ಕ್ರೀಡಾಕೂಟಗಳಲ್ಲಿ ಅಂತತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವಳು. ಭಾರತದ ಅಂಧರ ಫುಟ್ಬಾಲ್ ತಂಡದ ನಾಯಕಿಯಾಗಿದ್ದರು. ಪಂಜಾಬ್ ಹಾಗೂ ದೆಹಲಿ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಕರ್ನಾಟಕದ ಅಂಧ ಬಾಲಕಿಯರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು.
ಘಟನೆಯ ಸುದ್ದಿ ತಿಳಿದು ಹಾವೇರಿಗೆ ತೆರಳಿದ್ದ ಸಂಬಂಧಿಕರು, ಮರಣೋತ್ತರ ಪರೀಕ್ಷೆಯ ನಂತರ ಮೃತರಿಗೆ ತಲಾ ೧೦ ಲಕ್ಷ ಪರಿಹಾರ ಘೋಷಿಸದವರೆಗೆ ಹೆಣ ತೆಗೆಯಲ್ಲ ಎಂದು ಪ್ರತಿಭಟನೆ ನಡೆಸಿದರಾದರೂ ಸರ್ಕಾರ ಮೃತರಿಗೆ ಎರಡು ಲಕ್ಷ ಘೋಷಣೆ ಮಾಡಿದ ಬಳಿಕ ಸುಮ್ಮನಾದರು.
ಹಾಲ್ಕೊಳದ ದಂಪತಿ:
ಶಿವಮೊಗ್ಗ ನಗರದ ಹಾಲ್ಕೋಳ ನಿವಾಸಿ ಪರಶುರಾಮ್, ರೂಪಾ ದಂಪತಿ ಸಹ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಎಮ್ಮಹಟ್ಟಿಯ ಸಂಬಂಧಿಕರ ಮನೆಯವರು ದೇವರ ದರ್ಶನಕ್ಕೆ ಕರೆದರೆಂದು ಅವರ ಸಂಗಡ ತೆರಳಿದ್ದರು. ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಸರ್ಕಲ್ನ ಮಂಜುಳಾಬಾಯಿ, ಮಂಜುಳಾ, ಕಡೂರು ತಾಲೂಕಿನ ಅಂಜು, ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಹಾಲಿನ ಡೈರಿ ಗ್ರಾಮದ ನಿವಾಸಿ ಪುಣ್ಯಾಬಾಯಿ ಸಾವನ್ನಪ್ಪಿದ್ದಾರೆ.