![](https://www.chandravallinews.com/wp-content/uploads/2024/06/Poli-2.jpeg)
i
ಆತ್ಮಹತ್ಯೆಗೆ ಮುಂದಾದ ಮಹಿಳೆಯ ಜೀವ ಉಳಿಸಿದ ನಾಯಿ
ಚಂದ್ರವಳ್ಳಿ ನ್ಯೂಸ್, ಉಪ್ಪಿನಂಗಡಿ :
ವಿಶೇಷ ಅನಿಸುವ ಘಟನೆಯೊಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಇಲ್ಲಿನ ನೇತ್ರಾವತಿ ನದಿಯ ಬಳಿಯಲ್ಲಿ ಗುರುವಾರ ರಾತ್ರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ನೇತ್ರಾವತಿ ಸೇತುವೆ ಬಳಿಯಲ್ಲಿ ಅವರು ನದಿಗೆ ಹಾರಲು ಪ್ರಯತ್ನಿಸಿದ್ದ ಅವರ ವೇಲನ್ನ ಕಚ್ಚಿ ಹಿಡಿದು ನಾಯೊಂದು ಹಿಂದಕ್ಕೆ ಜಗ್ಗುತ್ತಿತ್ತು. ಇದನ್ನ ಗಮನಿಸಿದ ಬೈಕ್ಸವಾರರೊಬ್ಬರು ಅಲ್ಲಿನ ಊರಿನವರಿಗೆ ಏಂತದೋ ನಡೆಯುತ್ತಿದೆ ಇಲ್ಲಿ, ಸಂಶಯ ಬರುತ್ತಿದೆ ಎಂದು ವಿಷಯ ತಿಳಿಸಿದ್ದಾರೆ. ತಕ್ಷಣ ಬಂದ ಸ್ಥಳಿಯರು ಮಹಿಳೆಯನ್ನ ವಿಚಾರಿಸಿದಾಗ ಆಕೆ ಆತ್ಮಹತ್ಯೆಗೆ ಯತ್ನಿಸಲು ಬಂದಿರುವುದು ಗೊತ್ತಾಗಿದೆ. ಆದರೆ ಅವರ ಮನೆಯ ನಾಯಿಯು ಮಹಿಳೆಯನ್ನ ಹಿಂಬಾಲಿಸಿ ಆಕೆ ಹೊಳೆಗೆ ಹಾರಲು ಬಿಡದೇ ಹಿಂದಕ್ಕೆ ಎಳೆದಾಡುತ್ತಿತ್ತು. ಇದರಿಂದ ಊರಿನವರಿಗೆ ವಿಷಯ ಗೊತ್ತಾಗಿ ಮಹಿಳೆ ಬಚಾವ್ಆಗಿದ್ದಾಳೆ. ಆನಂತರ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಕೌಟುಂಬಿಕ ಕಲಹದಿಂದ ಮಹಿಳೆ ಈ ಕೃತ್ಯಕ್ಕೆ ಮುಂದಾಗಿದ್ದಳು ಎಂಬುದು ಗೊತ್ತಾಗಿದೆ.