i
ಮಂಜುನಾಥ ಗೌಡ ಬಣಕ್ಕೆ ಭರ್ಜರಿ ಜಯ..
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ೧೨ ನಿರ್ದೇಶಕರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವನೆಯಲ್ಲಿ ಹಾಲಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಆರ್ ಎಂ. ಮಂಜುನಾಥ ಗೌಡ ಅವರ ಬಣ ೧೧ ಸ್ಥಾನ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಚುನಾವಣೆ ಕಣಕ್ಕಿಳಿದಿದ್ದ ಬಿಜೆಪಿಯ ಸಹಕಾರ ಭಾರತಿ ಶೂನ್ಯ ಸಂಪಾದನೆ ಮಾಡಿದೆ. ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರ ರಾಷ್ಟ್ರಭಕ್ತ ಬಳಗದ ಪರ ಸ್ಪಧಿಸಿದ್ದ ಮಹಾಲಿಂಗ ಶಾಸ್ತ್ರಿ ಜಯ ಸಾಧಿಸಿದ್ದಾರೆ.
ಡಿಸಿಸಿ ಬ್ಯಾಂಕ್ ನ ಹೊಸನಗರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಮೇಶ್ ಅವಿರೋಧ ಆಯ್ಕೆಯಾಗಿದ್ದರು.
ಉಳಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ ಮತ್ತು ಶಿವನಂಜಪ್ಪ.ಜೆ ನಡುವಿನ ಜಿದ್ದಾಜಿದ್ದಿಲ್ಲಿ ದುಗ್ಗಪ್ಪ ಗೌಡ ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭದ್ರಾವತಿ ತಾಲ್ಲೂಕು ಕ್ಷೇತ್ರದಿಂದ ಹೆಚ್.ಎಲ್. ಷಡಾಕ್ಷರಿ ಸಿ.ಹನುಮಂತಪ್ಪ ನುಡುವಿನ ಸಿ ಹನುಮಂತ ಹಣಾಹಣಿಯಲ್ಲಿ ಗೆದ್ದು ಬೀಗಿದ್ದಾರೆ. ಇವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ತಾ. ಕ್ಷೇತ್ರದಿಂದ ಬಸವಾನಿ ವಿಜಯದೇವ್, ಮತ್ತು ಕೆ.ಎಸ್.ಶಿವಕುಮಾರ್ ನಡುವಿನ ಫೈಟ್ ನಲ್ಲಿ ವಿಜಯದೇವ್, ಪ್ರಾ ಕೃ ಪ ಸ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು, ರತ್ನಾಕರ ಹೊನಗೋಡು ನಡುವಿನ ಬಿಗ್ ಫೈಟ್ ನಲ್ಲಿ ಶಾಸಕ ಬೇಳೂರು ಗೋಪಾಲ ಕೃಷ್ಣ ಜಯಗಳಿಸಿದ್ದಾರೆ.
ಪ್ರಾ ಕೃ ಪ ಸ ಸಂಘ ನಿ ಶಿಕಾರಿಪುರ ತಾಲ್ಲೂಕು ಕ್ಷೇತ್ರದಿಂದ ಅಗಡಿ ಅಶೋಕ, ಎಸ್.ಪಿ ಚಂದ್ರಶೇಖರಗೌಡ ನಡುವಿನ ಫೈಟ್ ನಲ್ಲಿ ಚಂದ್ರಶೇಖರ್ ಗೌಡ ಗೆಲುವು ತಮ್ಮದಾಗಿಸಿಕೊಡಂರೆ, ಪ್ರಾ ಕೃ ಪ ಸ ಸಂಘ ನಿ ಸೊರಬ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ. ರುದ್ರಗೌಡ, ಶಿವಮೂರ್ತಿಗೌಡ ನಡುವೆ ಸಚಿವ ಮಧು ಅವರ ಆಪ್ತ ಕೆ.ಪಿ ರುದ್ರೇಗೌಡ ಗೆದ್ದಿದ್ದಾರೆ.
ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಶಿವಮೊಗ್ಗ ಉಪ ವಿಭಾಗದಿಂದ ಆರ್.ಎಂ. ಮಂಜುನಾಥಗೌಡ ಮತ್ತು ವಿರೂಪಾಕ್ಷಪ್ಪ ಜಿ. ಅವರ ಹೋರಾಟದಲ್ಲಿ ಮಂಜುನಾಥ್ ಗೌಡ ಗೆದ್ದಿದ್ದಾರೆ. ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಸಾಗರ ಉಪ ವಿಭಾಗದಿಂದ ಬಿ.ಡಿ ಭೂಕಾಂತ್, ಜಿ.ಎಸ್.ಸುಧೀರ್ ನಡುವಿನ ಜಿದ್ದಾ ಜಿದ್ದಿನಲ್ಲಿ ಜಿ.ಎಸ್ ಸುಧೀರ್ ಗೆದ್ದಿದ್ದಾರೆ.
ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಎಸ್.ಪಿ.ದಿನೇಶ ಮರಿಯಪ್ಪ ನಡುವಿನ ಫೈಟ್ ನಲ್ಲಿ ಮರಿಯಪ್ಪ ಗೆದ್ದಿದ್ದಾರೆ. ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಸಾಗರ ಉಪವಿಭಾಗದಿಂದ ಎಸ್.ಕೆ, ಬಸವರಾಜ್ ಡಿ.ಎಲ್, ರವೀಂದ್ರ ಹೆಚ್.ಎಸ್ ನಡುವಿನ ಫೈಟ್ ನಲ್ಲಿ ಬಸವರಾಜ್ ಗೆದ್ದಿದ್ದಾರೆ.
ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಆನಂದ ಡಿ, ಕೆ.ಎಲ್.ಜಗದೀಶ್ವರ್, ಹೆಚ್.ಬಿ ದಿನೇಶ್, ಮಹಾಲಿಂಗಯ್ಯ ಶಾಸ್ತ್ರಿ ಎಸ್.ಎನ್, ಜೆ.ಪಿ ಯೋಗೇಶ್, ಟಿ. ಶಿವಶಂಕರಪ್ಪ, ಹರೀಶ್ ಎನ್.ಡಿ ನಡುವಿನ ಫೈಟ್ ನಲ್ಲಿ ರಾಷ್ಟ್ರಭಕ್ತ ಬಳಗದ ಮಹಲಿಂಗ ಶಾಸ್ತ್ರಿ ಗೆದ್ದಿದ್ದಾರೆ.
ಇದರಿಂದ ೧೩ ಕ್ಷೇತ್ರದಲ್ಲಿ ೧೨ ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದು, ಮತ್ತೆ ಆರ್ ಎಂ. ಮಂಜುನಾಥ್ ಗೌಡರ ಮೇಲುಗೈ ಸಾಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಆರ್ ಎಂ ಎಂ ಮತ್ತೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಮತಗಳ ವಿವರ
ಶಿವಮೊಗ್ಗ ತಾಲೂಕು
ಕೆ ಪಿ ದುಗ್ಗಪ ಗೌಡ -೧೩,
ಶಿವನಂಜಪ್ಪ- ೧೨
ಭದ್ರಾವತಿ-
ಎಚ್ ಎಲ್ ಷಡಾಕ್ಷರಿ–೭
ಸಿ. ಹನುಮಂತು-೯
ತೀರ್ಥಹಳ್ಳಿ
ಬಸವಾನಿ ವಿಜಯದೇವ್- ೧೪
ಕೆ ಎಸ್ ಶಿವಕುಮಾರ್-೯
ಸಾಗರ
ಬೇಳೂರು ಗೋಪಾಲಕೃಷ್ಣ- ೧೫
ರತ್ನಾಕರ ಹೊನಗೋಡು- ೧೪
ಶಿಕಾರಿಪುರ-
ಅಗಡಿ ಅಶೋಕ್- ೧೧
ಎಸ ಪಿ ಚಂದ್ರಶೇಖರ್ ಗೌಡ -೨೬
ಸೊರಬ
ಕೆ ಪಿ ರುದ್ರಗೌಡ- ೧೪
ಶಿವಮೂರ್ತಿ ಗೌಡ- ೧೦
ಹೊಸನಗರ
ಎಂ ಎಂ ಪರಮೇಶ್- ಅವಿರೋಧ ಆಯ್ಕೆ
ಶಿವಮೊಗ್ಗ ಉಪವಿಭಾಗ ಕ್ಷೇತ್ರ – ೨
ಆರ್ ಎಂ ಮಂಜುನಾಥ ಗೌಡ- ೧೫
ಜಿ ವಿರೂಪಾಕ್ಷಪ್ಪ- ೩
ಸಾಗರ ಉಪವಿಭಾಗ
ಬಿ ಡಿ ಭೂಕಾಂತ- ೨೧
ಜಿಎನ್ ಸುಧೀರ್-೨೩
ಶಿವಮೊಗ್ಗ ಉಪವಿಭಾಗ ಕ್ಷೇತ್ರ-೩
ಎಸ್ ಪಿ ದಿನೇಶ್- ೧೬
ಎಸ್ ಕೆ ಮರಿಯಪ್ಪ- ೩೯
ಸಾಗರ ಉಪವಿಭಾಗ
ಬಸವರಾಜ ಪಿ. ಎಲ್- ೩೨
ರವೀಂದ್ರ ಎಚ್ ಎಸ್-೨೧
ತಿರಸ್ಕೃತ-೩
ಶಿವಮೊಗ್ಗ ಉಪವಿಭಾ ಕ್ಷೇತ್ರ-೪
ಡಿ ಆನಂದ- ೧೬
ಕೆ ಎಲ್ ಜಗದೀಶ್ವರ್- ೪೫
ಮಹಾಲಿಂಗಯ್ಯ ಶಾಸಿ- ೪೭
ಜೆ ಪಿ ಯೋಗೇಶ್-೧೪
ಸಾಗರ ಉವಿಭಾಗ
ಟಿ ಶಿವಶಂಕರಪ್ಪ- ೭೫
ಎಂ ಡಿ ಹರೀಶ್- ೬೧
ತಿರಸ್ಕೃತ- ೧
ಒಟ್ಟೂ ೬೨೧ ಮತಗಳು ಚಲಾವಣೆಯಾಗಿದ್ದು, ೫ ಮತ ತಿರಸ್ಕೃತವಾಗಿದೆ.