![](https://www.chandravallinews.com/wp-content/uploads/2024/06/0-9.jpg)
i
ಜಮೀನು ಖರೀದಿ: ಆಕ್ಷೇಪಣೆ ಸಲ್ಲಿಸಲು ಮನವಿ
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ತುಮಕೂರು ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯನ್ನು ಅನುಷ್ಠಾನಗೊಳಿಸಲು ಗುರಿ ನಿಗಧಿಪಡಿಸಿದ್ದು, ಭೂ ಮಾಲೀಕರಿಂದ ಬಂದಂತಹ ಜಮೀನುಗಳನ್ನು ಖರೀದಿಸಿ ನಿಗಮದ ನಿಯಮಾನುಸಾರ ಅರ್ಜಿ ಸಲ್ಲಿಸಿ ಅರ್ಹ ಪರಿಶಿಷ್ಟ ಪಂಗಡ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರ ಫಲಾಪೇಕ್ಷೆಗಳಿಗೆ ಮಂಜೂರು ಮಾಡಬೇಕಾಗಿರುತ್ತದೆ. ನಾಗಭೂಷಣ್ ರೆಡ್ಡಿ ಬಿನ್ ತಿಮ್ಮಾರೆಡ್ಡಿ, ಬಿ.ಅಚ್ಚಮ್ಮನಹಳ್ಳಿ, ಕಸಬಾ ಹೋಬಳಿ, ಪಾವಗಡ ತಾಲ್ಲೂಕು(ಸರ್ವೆ ನಂ.೮೪/೩ ೫.೦೦ ಖುಷ್ಕಿ, ಜಮೀನು ಇರುವ ಸ್ಥಳ: ಕಡಪಲಕೆರೆ) ಹಾಗೂ ಗಂಗಮ್ಮ ಕೋಂ ಬೋರೇಗೌಡ, ತಿಗಳರಪಾಳ್ಯ, ವಿಠಲಾಪುರ ಅಂಚೆ, ಮಾಯಸಂದ್ರ ಹೋಬಳಿ, ತುರುವೇಕರೆ ತಾಲ್ಲೂಕು(ಸರ್ವೆ ನಂ.೧೦೫/೩, ೧೦೩/೧, ೧.೦೦, ೦.೩೬ ಖುಷ್ಕಿ, ಜಮೀನು ಇರುವ ಸ್ಥಳ: ವರಹಾಸಂದ್ರ) ಇವರ ಜಮೀನುಗಳನ್ನು ಖರೀದಿಸಲು ಏನಾದರೂ ಆಕ್ಷೇಪಣೆ/ತಕರಾರುಗಳಿದ್ದಲ್ಲಿ ೧೫ ದಿನಗಳೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ತುಮಕೂರು ಇವರಿಗೆ ಲಿಖಿತ ರೂಪದಲ್ಲಿ ನೀಡಲು ಕೋರಲಾಗಿದೆ.