![](https://www.chandravallinews.com/wp-content/uploads/2024/06/ksrtc-8-1589879536-4.jpg)
i
ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಚಿವರಿಗೆ ಮನವಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೀರ್ಥಹಳ್ಳಿಯಿಂದ-ಉಂಟೂರು ಕಟ್ಟೆ ಕೈಮರ-ಯಡೂರು-ಮಾಸ್ತಿಕಟ್ಟೆ ಮೂಲಕ ನಗರ ಹೋಬಳಿ ಕಛೇರಿಗೆ ಹೋಗಲು ಈ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆ ತನಕ ಮಾರ್ಗದಲ್ಲಿ ಬಸ್ಸಿನ ಸಂಚಾರ ಇರುವುದಿಲ್ಲ. ಹೊಸನಗರ ತಾಲ್ಲೂಕಿಗೆ ಸೇರಿದ ಕೊರನಕೀಟೆ, ಗಾರ್ಡರಗದ್ದೆ ಈ ಭಾಗದ ಜನರಿಗೆ ಹೊಸನಗರ ತಾಲ್ಲೂಕು ಕೇಂದ್ರಕ್ಕೆ ಹೋಗಲು ಸುಮಾರು 120 ಕಿ.ಮೀ. ಪ್ರಯಾಣಿಸಬೇಕಾಗಿದೆ. ನಗರ ನಾಡ ಕಚೇರಿಗೆ, ಹೊಸನಗರ ತಾಲ್ಲೂಕು ಕೇಂದ್ರಕ್ಕೆ ಹೋಗುವ ರೈತರಿಗೆ ಮತ್ತು ವ್ಯದ್ಯಾಪ್ಯ ವೇತನ ಮುಂತಾದ ಸೌಲಭ್ಯಕ್ಕಾಗಿ ಹೋಗಲು ಸಾರ್ವಜನಿಕರಿಗೆ ತೊಂದರೆ ಆಗಿರುವುದರಿಂದ ಜನರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದಿಂದ 4 ರಿಂದ 6 ಟಿಪ್ಪುಗಳನ್ನು ಉಂಟೂರು ಕಟ್ಟೆ ಕೈಮರ-ಯಡೂರು-ಮಾಸ್ತಿಕಟ್ಟೆ ನಗರಕ್ಕೆ ಹೋಗಿ ಬರುವಂತಹ ವ್ಯವಸ್ಥೆಯನ್ನು ಮಾಡಬೇಕೆಂದು ಮನವಿಯನ್ನು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ಅವರಿಗೆ ಸಲ್ಲಿಸಿದ್ದರು.
ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರು ಪತ್ರ ಮುಖೇನ ಬಸ್ ವ್ಯವಸ್ಥೆಯನ್ನು ಕಲ್ಪಿಸಲು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲಿಸಿದರು. ಸದರಿಯವರ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವರು ಈ ಕೂಡಲೇ ಕೋರಿರುವ ಮಾರ್ಗದಲ್ಲಿ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.