![](https://www.chandravallinews.com/wp-content/uploads/2024/06/WhatsApp-Image-2024-06-30-at-6.57.02-AM-1.jpeg)
i
ಕೇಂದ್ರ ಸಚಿವ ಕುಮಾರಸ್ವಾಮಿ ಭದ್ರಾವತಿಗೆ ಇಂದು ಭೇಟಿ
ಚಂದ್ರವಳ್ಳಿ ನ್ಯೂಸ್, ಭದ್ರಾವತಿ :
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ರವರು ಭದ್ರಾವತಿಯ ವಿಐಎಸ್ಎಲ್ ನ ಪುನಾರಾರಂಭ ಹಾಗೂ ನವೀಕರಣದ ವಿಚಾರವಾಗಿ ದಿನಾಂಕ 30.6.2024ರ ಭಾನುವಾರದಂದು ದೆಹಲಿಯಿಂದ ಬೆಳಗ್ಗೆ 8 ಗಂಟೆಗೆ ನೇರವಾಗಿ ವಿಮಾನದ ಮುಖಾಂತರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 11 ಗಂಟೆಗೆ ಬಂದಿಳಿಯಲಿದ್ದು,11-45 ಕ್ಕೆ ರಸ್ತೆಯ ಮುಖಾಂತರ ಭದ್ರಾವತಿಯ ವಿಐಎಸ್ಎಲ್ ನ ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಕಂಪನಿಯ ಮೂಲಭೂತ ಸೌಕರ್ಯಕ್ಕಾಗಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆಯನ್ನು ನಡೆಸಿ ರಸ್ತೆಯ ಮುಖಾಂತರ ಭದ್ರಾವತಿಯಿಂದ ನಿರ್ಗಮನ 4 ಗಂಟೆಗೆ ಸರಿಯಾಗಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ತಲುಪಿ ಸಂಜೆ 4:15 ಕ್ಕೆ ಶಿವಮೊಗ್ಗದಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ತಲುಪಲಿದ್ದಾರೆ.