i
ವಾರಸುದಾರರಿಗೆ ಚಿನ್ನದ ಸರ ತಲುಪಿಸಿದ ಟೈಲರ್..
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಳಚಿಬಿದ್ದುದನ್ನು ಗಮನಿಸಿದ ಟೈಲರ್ ಒಬ್ಬ ಅದನ್ನು ಎತ್ತಿಕೊಂಡು ಪೊಲೀಸರಿಗೆ ತಲುಪಿಸಿ ಅನಂತರ ಅವರ ಮೂಲಕ ವಾರಸುದಾರರಿಗೆ ತಲುಪಿಸಿದ ಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ನಗರದ ಬುದ್ಧನಗರದ ವಾಸಿ ಮಹಿಳೆ ರಂಜಿತಾ ಮತ್ತು ಅವರ ತಾಯಿ ರಾಜೇಶ್ವರಿ ದ್ವಿ ಚಕ್ರವಾಹನದಲ್ಲಿ ಹೋಗುತ್ತಿದ್ದಾಗ ರಾಜೇಶ್ವರಿ ಅವರು ಧರಿಸಿದ್ದ ೩೨ ಗ್ರಾಂ ತೂಕದ ಬಂಗಾರದ ಸರ ಕಳಚಿ ಬಿದ್ದಿತ್ತು. ಇದನ್ನು ಬಿ ಎಚ್ ರಸ್ತೆಯ ಸಂಗಮ್ ಟೈಲರ್ ಮಾಲಕ ಕುಮಾರ್ ಅವರಿಗೆ ಗಮನಿಸಿ ಎತ್ತಿಕೊಂಡು ಕೋಟೆ ಪೊಲೀಸರಿಗೆ ತಲುಪಿಸಿದ್ದರು.
ಕೋಟೆ ಪಿಐ ಗುರುಬಸವರಾಜ್ ಸಮ್ಮುಖದಲ್ಲಿ ಬಂಗಾರದ ಸರವನ್ನು ಮಾಲಕಿ ರಾಜೇಶ್ವರಿ ಅವರಿಗೆ ಹಸ್ತಾಂತರಿಸಲಾಗಿದೆ. ಕುಮಾರ್ ಅವರ ಈ ನಡೆಯು ಪ್ರಶಂಸಗೆ ಒಳಗಾಗಿದೆ.