![](https://www.chandravallinews.com/wp-content/uploads/2024/07/WhatsApp-Image-2024-07-03-at-4.54.31-PM-1024x655.jpeg)
i
ಬಸ್ ನಿಲ್ದಾಣದಲ್ಲಿ ನೆಕ್ಲೇಸ್ ಕಳ್ಳತನ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಚಿನ್ನಾಭರಣ ಕಳುವಾದ ಪ್ರಕರಣ ವರದಿಯಾಗಿದೆ.
ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಮಹಿಳೆ ಚಿನ್ನ ಕಳೆದುಕೊಂಡವರು.
ಇವರು ತನ್ನ ತಾಯಿ ಮತ್ತು ಮಗಳ ಜೊತೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದದಲ್ಲಿ ಮದುವೆ ಮುಗಿಸಿಕೊಂಡು ವಾಪಾಸ್ ಊರಿಗೆ ತೆರಳಲು ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿದ್ದರು.ರೆ. ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆ ಹೋಗುವ ಬಸ್ ಹತ್ತಿದ್ದು ಈ ವೇಳೆ ಬಸ್ ರಶ್ ಆಗಿತ್ತು . ಬೈಪಾಸ್ ಹತ್ತಿರ ಬಸ್ ಹೋಗುವಾಗ ಆಧಾರ್ ಕಾರ್ಡ್ ತೆಗೆಯಲು ವ್ಯಾನಿಟಿಬ್ಯಾಗ್ ನೋಡಿದಾಗ ಜಿಪ್ ಓಪನ್ ಆಗಿತ್ತು. ಗಾಬರಿಗೊಂಡು ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ೧೫ ಗ್ರಾಮ್ ನ ಬಂಗಾರದ ನೆಕ್ಲೆಸ್ ಕಳುವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬೈಪಾಸ್ ನಲ್ಲಿ ಇಳಿದ ಮಹಿಳೆ ಬಸ್ ನಿಲ್ದಾಣಕ್ಕೆ ಬಂದು ಹುಡುಕಿದ್ದಾರೆ. ಎಲ್ಲೂ ಸಿಕ್ಕಿರಲಿಲ್ಲ. ತನ್ನ ತಾಯಿ ಮದುವೆಗೆ ಉಡುಗೊರೆಯಾಗಿ ನೀಡಿದ್ದ ನೆಕ್ಲೆಸ್ ಅದಾಗಿದ್ದು, ಬಸ್ ಹತ್ತುವಾಗ ಕಳ್ಳರ ಕೈಚಳಕದಿಂದ ಒಡವೆಯನ್ನು ಕಳೆದುಕೊಳ್ಳುವಂತಾಗಿದೆ.