ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕಾಂಗ್ರೆಸ್ ಸರ್ಕಾರ ಇಡೀ ಕರ್ನಾಟಕವನ್ನು ವಕ್ಫ್ಬೋರ್ಡ್ಗೆ ಅಧಿಕೃತವಾಗಿಯೇ ಮಾರಾಟ ಮಾಡುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಕಿಡಿಕಾರಿದೆ.
ರಾಜ್ಯದ ವಿವಿಧ 328 ಸ್ಥಳಗಳಲ್ಲಿರುವ ಖಬರಸ್ತಾನಗಳಿಗೆ ಸುಮಾರು 2750 ಎಕರೆ ಭೂಮಿಯನ್ನು ಮಂಜೂರಾತಿ ಮಾಡಲು ಕಂದಾಯ ಇಲಾಖೆಗೆ ಸಿಎಸ್ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ಭ್ರಷ್ಟ ಸಿದ್ದರಾಮಯ್ಯ ಅವರ ಆತ್ಯಾಪ್ತರಾದ ಕೃಷ್ಣಭೈರೇಗೌಡ ಹಾಗೂ ಜಮೀರ್ ಅಹಮದ್ ಖಾನ್ ಅವರು ಸೇರಿಕೊಂಡು ವಕ್ಫ್ಬೋರ್ಡ್ಗೆ ರಾಜ್ಯದ ಸರ್ಕಾರಿ ಭೂಮಿಯನ್ನು ರಾಜಾರೋಷವಾಗಿಯೇ ಬರೆದು ಕೊಡುತ್ತಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ.

