ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತರ ಪ್ರದೇಶ ರಾಜ್ಯದ ಇತ್ವಾ ನಗರದ ವೀರ ಯೋಧ ಹವಾಲ್ದಾರ್ ಸೂರಜ್ಸಿಂಗ್ಯಾದವ್, ಮಹಾರಾಷ್ಟ್ರ ರಾಜ್ಯದ ನಾಂದೇಡ್ಜಿಲ್ಲೆಯ ವೀರ ಯೋಧ ಸಚಿನ್ಯಾದವ್ವನಾಂಜೆ, ಹರ್ಯಾಣ ರಾಜ್ಯದ ಹಿಸ್ಸಾರ್ಜಿಲ್ಲೆಯ ವೀರ ಯೋಧ ಕಮಲ್ಕಾಂಬೋಜ್, ಹರ್ಯಾಣ ರಾಜ್ಯದ ಚಾರ್ಕಿ ದಾದ್ರಿ ನಗರದ ವೀರ ಯೋಧ ಅಮಿತ್ಚೌಧರಿ ಅವರು ಪಾಕಿಸ್ತಾನ ನಡೆಸಿದ ಕುತಂತ್ರದಲ್ಲಿ ವೀರ ಮರಣ ಹೊಂದಿದ್ದಾರೆ.
ಜಮ್ಮು-ಕಾಶ್ಮೀರದ ಗಡಿಯಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿದ್ದ ವೇಳೆ ನಾಲ್ಕು ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಈ ವೀರಯೋಧರ ಶೌರ್ಯ, ತ್ಯಾಗ ಹಾಗೂ ಬಲಿದಾನವನ್ನು ಈ ದೇಶ ಎಂದಿಗೂ ಮರೆಯುವುದಿಲ್ಲ.
ಹುತಾತ್ಮ ಯೋಧರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಮಸ್ತ ಭಾರತೀಯರು ಪರವಾಗಿ ಜೆಡಿಎಸ್ ಪಕ್ಷವು ಪ್ರಾರ್ಥಿಸಿದೆ.