ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ್ಕೆ ರಾಜ್ಯ ಸಂಘ ಚುನಾವಣೆ ಘೋಷಣೆ ಮಾಡಿದ್ದು ನ.೯ ಕ್ಕೆ ನಡೆಯಬೇಕಿರುವ ಚುನಾವಣೆಗೆ ಅ.೩೦ ಉಮೇದುವಾರಿಕೆ ಹಿಂಪಡೆಯಲು ಅಂತಿಮ ದಿನಾಗಿತ್ತು.
೨೫ ಸ್ಥಾನಗಳಿಗೆ ನಡೆಯಬೇಕಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಜಿಲ್ಲೆಯ ೫೦ ಪತ್ರಕರ್ತರು ಸ್ಪರ್ಧಾಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಹೊನ್ನಮ್ಮ ಹೇಳಿದರು.
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಹೊಸಕೊಟೆಯ ಜಿ. ಶ್ರೀನಿವಾಸ್, ಹಾಗೂ ನೆಲಮಂಗಲದ ಸುಗ್ಗರಾಜು ಸ್ಪರ್ಧಾ ಕಣದಲ್ಲಿದ್ದಾರೆ ಎಂದು ಉಪಚುನಾವಣಾಧಿಕಾರಿ ಕೊತ್ತೂರಪ್ಪ ತಿಳಿಸಿದರು.
ಉಳಿದ ಸ್ಥಾನಗಳಿಗೆ ಸ್ಪರ್ಧಿಸಿರುವವರು : ಮೂರು ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಕೃಷ್ಣಾನಾಯಕ್, ಜೆ.ಆರ್. ಮುನಿವೀರಣ್ಣ, ರಾಘವೇಂದ್ರಾಚಾರ್, ಎಸ್.ಬಿ. ರಫೀವುಲ್ಲ, ಶಾಂತಮೂರ್ತಿ ಪ್ರಧಾನಕಾರ್ಯದರ್ಶಿ ಸ್ಥಾನಕ್ಕೆ ಡಿ.ಎಂ. ಮಂಜುನಾಥ್, ಆರ್. ರಮೇಶ್.
ಕಾರ್ಯದರ್ಶಿಯ ಮೂರು ಸ್ಥಾನಗಳಿಗೆ ಆನಂದ ವೈ, ಎಂ.ಆರ್.ನಾಗರಾಜ್, ಮುರಳಿಮೋಹನ, ಆರ್.ಸತೀಶ್, ಡಿ.ಎನ್.ಸುರೇಶ, ಖಜಾಂಚಿ ಸ್ಥಾನಕ್ಕೆ ಎ.ಮಧು. ಜೆ.ಮುನಿರಾಜು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಸಿಪಿ .ಕುಸುಮ, ವಿ. ಮಂಜುನಾಥ್.
ಜಿಲ್ಲಾ ಕಾರ್ಯಕಾರಿ ಸದಸ್ಯರುಗಳ ೧೫ ಸ್ಥಾನಗಳಿಗೆ ಅಬ್ದುಲ್ ಮುಯಿದ್, ಎಚ್.ಕೃಷ್ಣಮೂರ್ತಿ , ವಿ.ಕೃಷ್ಣಮೂರ್ತಿ , ಗೋಪಾಲಕೃಷ್ಣ ಎನ್, ಬಿ.ಎಂ. ಗೋಪಿನಾಥ್, ಗಂಗರಾಜು ಶಿರವಾರ, ಚಂದ್ರಪ್ಪ, ಚಂದ್ರಶೇಖರ್ ಡಿ, ಹೈದರ್ಸಾಬ್, ವಿ.ಜಗದೀಶ್, ಜಯಲಕ್ಷ್ಮೀ, ಪಿ.ನಟರಾಜ್, ಟಿ.ಎಂ. ನಾಗರಾಜ್, ಸಿ.ಪ್ರಕಾಶ್, ಪ್ರಮೋದಕುಮಾರ್ ಆರ್, ಪ್ರದೀಪ್ಕುಮಾರ್, ಮುನಿಯಪ್ಪ, ಎಚ್.ಎಂ.ಮುನಿರಾಜು, ವಿ.ಸುನೀಲ್, ಎನ್.ಎಸ್.ಮೂರ್ತಿ,
ಎಚ್.ಕೆ.ಮಂಜುನಾಥ್, ಎಂ.ಆರ್. ಮಂಜುನಾಥ್, ಬಿ. ರಮೇಶ್, ಎಸ್.ರಾಜಗೋಪಾಲ, ರಂಗನಾಥ್ ಆರ್, ವಿನಯ್ ಎಂ, ಶ್ರೀಧರ್ ಆರ್, ಸಿ.ಶ್ರೀನಿವಾಸ್, ಶ್ರೀನಿವಾಸಗಾಂಧಿ, ಸುಮಿತ್ರಾದೇವಿ, ಎನ್.ಸಿ. ಮುನಿವೆಂಕಟರಮಣ ಸ್ಪರ್ಧಾಕಣದಲ್ಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆಯ ವಿವರ ನೀಡಿದ ಚುನಾವಣಾಧಿಕಾರಿ ಹೊನ್ನಮ್ಮ ಮತ್ತು ಸಹಾಯಕ ಚುನಾವಣಾಧಿಕಾರಿ ಕೊತ್ತೂರಪ್ಪ.

