ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದಾವಣಗೆರೆ ವಿಶ್ವ ವಿದ್ಯಾಲಯವು 2025 ರ ಜೂನ್/ಜುಲೈನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ವಿಭಾಗದ ವಿದ್ಯಾರ್ಥಿನಿ ಹಾಗೂ ಯಲ್ಲದಕೆರೆ ಸಮೀಪದ ಬಡ ಗೊಲ್ಲರಹಟ್ಟಿಯ ರೂಪ.ಸಿ ರವರು 6 ನೇ ರ್ಯಾಂಕ್ ಪಡೆದು, ಕಾಲೇಜಿಗೆ, ಗ್ರಾಮಕ್ಕೆ ಮತ್ತು ತಾಲೂಕಿಗೆ ಕೀರ್ತಿ ತಂದಿರುತ್ತಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಿ.ಆರ್. ಹನುಮಂತರಾಯ, ರ್ಯಾಂಕ್ ಪಡೆದ ವಿದ್ಯಾರ್ಥಿನಿಗೂ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೂ, ಸದಸ್ಯರಿಗೂ ಹಾಗೂ ಸಮಸ್ತ ಪ್ರಾಧ್ಯಾಪಕ ವೃಂದಕ್ಕೆ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿರುತ್ತಾರೆ.

