ಕೊಟ್ಟಿಗೆ ಮಾಚೆನ ಹಳ್ಳಿಯಲ್ಲಿ 66 ತಳಿ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಸಾಸಲು ಹೋಬಳಿಯ ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮದಲ್ಲಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಹರಳಿನ ಸುಧಾರಿತ ಐ.ಸಿ.ಎಚ್-66 ತಳಿಯ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ನಡೆಯಿತು.

ಕೃಷಿ ವಿಜ್ಞಾನ ಕೇಂದ್ರದಲ್ಲಿನ   ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಜಿ.ಕೆ.ನಿಂಗರಾಜು ಹರಳು ತಳಿಯ ವಿಶೇಷತೆ ಕುರಿತು ಮಾಹಿತಿ ನೀಡಿ, ಹರಳು ಬೆಳೆಯ ಸುಧಾರಿತ ಬೇಸಾಯ ಕ್ರಮ, ಅಧಿಕ ಇಳುವರಿ ನೀಡುವ ತಳಿ ಆಗಿರುವ ಐ.ಸಿ.ಎಚ್-66 ಬಿತ್ತನೆ ಸಂದರ್ಭದಲ್ಲಿ ತಾಕಿನ ಸುತ್ತ ಕಂದಕ ಬದು ನಿರ್ಮಾಣ, ಕೊಟ್ಟಿಗೆ ಗೊಬ್ಬರದ ಬಳಕೆ ಹಾಗೂ ಮಣ್ಣಿನ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಬಳಕೆ ಮಾಡಬೇಕು.

- Advertisement - 

 ಹರಳು ಬೆಳೆ ಮಳೆಗಾಲ ಮುಕ್ತಾಯವಾದ ನಂತರ ಮಾರ್ಚ್‌ವರೆಗೆ ಇರಲಿದೆ. ಹಾಗಾಗಿ ತೇವಾಂಶ ಸಂರಕ್ಷಣೆ ಗಾಗಿ ಸಾಲುಗಳು ಮತ್ತು ಅಗತ್ಯಕ್ಕೆ ತಕ್ಕಂತೆ ಇಳಿಜಾರಿಗೆ ಅಡ್ಡಲಾಗಿ ಹರಳಿನ ಸಾಲು ಇರುವಂತೆ ನೋಡಿಕೊಳ್ಳಬೇಕು. ಹರಳಿನ ತಾಕಿನ ಸುತ್ತಕಂದಕ ಬದುಗಳ ನಿರ್ಮಾಣ,” ಕೊಟ್ಟಿಗೆ ಗೊಬ್ಬರದ ಬಳಕೆ (2 ಟನ್/ಎ), ಲ್ಲಿ ಶಿಫಾರಸ್ಸಿತ ರಸಗೊಬ್ಬರಗಳ ಸಿಂಪರಣೆ (ಸಾ.ರಂ.ಪೊ – 15:15:10ಕಿ.ಗ್ರಾಂ/ಎ), ” ತೇವಾಂಶ ಸಂರಕ್ಷಣೆಗಾಗಿ ಸಾಲು, ಅಗತ್ಯಾ ಈ ನುಸಾರ ಸಸ್ಯ ಸಂರಕ್ಷಣಾ ರಾಸಾಯನಿಕಗಳ ” ಬಳಕೆ ತಾಂತ್ರಿಕತೆ ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಮಣ್ಣು ವಿಜ್ಞಾನಿ ಡಾ.ಡಿ.ರವಿಕುಮಾರ್ ಈ ನೀರು, ಮಣ್ಣು ಮಾದರಿ ಪರೀಕ್ಷೆಯ ” ಮಹತ್ವ ಮತ್ತು ಮಣ್ಣಿನ ಆರೋಗ್ಯ, – ಫಲವತ್ತತೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು

- Advertisement - 

ಕ್ಷೇತ್ರೋತ್ಸವದಲ್ಲಿ ಕೃಷಿ ವಿಸ್ತರಣಾ ವಿಜ್ಞಾನಿ ಡಾ.ವೈ.ಎಂ.ಗೋಪಾಲ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿ, ನೂತನ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಪಡೆದು ಕ್ಷೇತ್ರದಲ್ಲಿ ಅಳವಡಿಸಿಕೊಂಡಾಗ ಉತ್ಪಾದಕತೆ ಹೆಚ್ಚುವುದರ ಜತೆಗೆ ಬೇಸಾಯದ ಖರ್ಚನ್ನೂ ಕಡಿಮೆ ಮಾಡಬಹುದು. ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜ್ಞಾನಿಗಳು ನೀಡುವ ಸಲಹೆ ಮತ್ತು ಸೂಚನೆ ಪಾಲಿಸಬೇಕೆಂದು ತಿಳಿಸಿದರು.

Share This Article
error: Content is protected !!
";