ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮನೆಯೆಂಗಳದಲ್ಲಿ ಜೆಟ್ ಶಾಲೆ ಶಿಕ್ಷಕರು ಹಾಜರಾಗಿ ಅಭಿನಂದಿಸಿದ್ದಾರೆ.
ಫೆಬ್ರವರಿ 7ನೇ ಶನಿವಾರ ನಡೆಯಲಿರುವ ಹಿರಿಯೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲೇಖಕ ಎಂ ಜಿ ರಂಗಸ್ವಾಮಿ ಅವರನ್ನು ಗೊಲ್ಲಹಳ್ಳಿಯ ಜಟ್ ಸಿ ಬಿ ಎಸ್ ಸಿ ಶಾಲಾವತಿಯಿಂದ ಬುಧವಾರ ಸತ್ಕರಿಸಲಾಯಿತು.
ಜೆಟ್ ಶಾಲೆಯ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ ನೇತೃತ್ವದಲ್ಲಿ ಉಪಪ್ರಾಂಶಪಾಲ ಧನರಾಜ್, ಶಾಲೆಯ ಶಿಕ್ಷಕಿ ಹಾಗೂ ಕವಿಯತ್ರಿ ಸರಸ್ವತಿ ಕೆ., ನಾಗರಾಜ್ ಸೇರಿದಂತೆ ಹಲವಾರು ಶಿಕ್ಷಕರು ರಂಗಸ್ವಾಮಿಯವರ ಮನೆಗೆ ತೆರಳಿ ಅಭಿಮಾನದ ಅಭಿನಂದನೆ ಸಲ್ಲಿಸಿದರು.

