ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೆಹಲಿಯಲ್ಲಿ ನಡೆದ ಸಿಎಲ್ಪಿ ಸಭೆಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿ, ದೇಶದ ರಾಜಕೀಯ ಹಾಗೂ ಸಂಘಟನಾ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ವಿಚಾರ ವಿನಿಮಯ ನಡೆಯಿತು ಎಂದು ಸಂಸದರು ಹೇಳಿದ್ದಾರೆ.
ನನ್ನೊಂದಿಗೆ ತಮಿಳುನಾಡಿನ ಮೈಲಾಡುತುರೈ ಕ್ಷೇತ್ರದ ಸಂಸದೆ ಸುಧಾ ರಾಮಕೃಷ್ಣನ್ ಹಾಗೂ ರಾಜಸ್ಥಾನದ ಆಳ್ವಾರ್ ಕ್ಷೇತ್ರದ ಸಂಸದೆ ಸಂಜನಾ ಜಾಟವ್ ಉಪಸ್ಥಿತರಿದ್ದರು ಎಂದು ಡಾ.ಪ್ರಭಾ ತಿಳಿಸಿದ್ದಾರೆ.

