ಜನರ ಮನೆ ಬಾಗಿಲಿಗೆ ಸರ್ಕಾರಿ ಯೋಜನೆ ತಲುಪಿಸಿ-ಡಿಸಿ ಕವಿತಾ ಮನ್ನಿಕೇರಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ಸರ್ಕಾರಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಮಹತ್ವವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾಗೊಳಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಮಹತ್ವವಾಗಿದೆ. ಕಾರ್ಯಭಾರದ ಒತ್ತಡಗಳ ನಿವಾರಣೆಗೆ, ಆರೋಗ್ಯವೃದ್ದಿಗೆ ಹಾಗೂ ನೌಕರರ ಸುಪ್ತ ಪ್ರತಿಭೆಗಳ ಅನಾವರಣಕ್ಕೆ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ದೆಗಳು ಸಹಕಾರಿಯಾಗಲಿವೆ ಎಂದರು.

- Advertisement - 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದೇಶದಲ್ಲಿಯೇ ಮಾದರಿಯಾದ ನೌಕರರ ಸಂಘವಾಗಿದ್ದು, ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತಿದೆ. ಒತ್ತಡದ ನಿವಾರಣೆಗೆ ಎರಡು ದಿನಗಳ ಕ್ರೀಡಾ ಕೂಟ ಸಹಕಾರಿಯಾಗಲಿದೆ ಎಂದರು.

ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗ್ರೇಸಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀಕಾಂತ ವಾಲ್ಮೀಕಿ, ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಡ್ಲಿ ವೀರಭದ್ರೇಶ, ಕಾರ್ಯದರ್ಶಿ ಟಿ.ಪಂಪಣ್ಣ, ಖಜಾಂಚಿ ಕೆ.ಮಲ್ಲೇಶಪ್ಪ, ಜಿಲ್ಲಾ ಗೌರವಾಧ್ಯಕ್ಷ ಹೆಚ್.ರಾಜೀವ್, ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಹೆಗಡಿಯಾಳ್, ರಾಜ್ಯ ಪದಾಧಿಕಾರಿಗಳಾದ ಎಂ.ಪಿ.ಎಂ.ಅಶೋಕ, ಡಾ.ಮುನಿವಾಸುದೇವರೆಡ್ಡಿ, ಕೆ.ಬಸವರಾಜ, ತಾಲೂಕು ಅಧ್ಯಕ್ಷರಾದ ಎಂ.ಪಿ.ಎಂ ಮಂಜುನಾಥ, ಎ.ಕೋಟ್ರಗೌಡ, ಎಸ್.ವೆಂಕಟೇಶ, ಎನ್.ಜೆ.ಮನೋಹರ, ಕೆ.ಬಸವರಾಜ ಹಾಗೂ ಯೋಗೀಶ್ವರ ದಿನ್ನಿ ಇತರರಿದ್ದರು.

- Advertisement - 

 

 

 

 

Share This Article
error: Content is protected !!
";