ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ನಗರದ ರಾಜಕುಮಾರ್ ರಸ್ತೆಯಲ್ಲಿನ ನೂತನ ಜಿಲ್ಲಾಡಳಿತ ಭವನದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ.
ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ಈ ಜಿಲ್ಲಾಡಳಿತ ಭವನ ನಿರ್ಮಾಣವಾಗಿದೆ. ಇಲ್ಲಿರುವ ಶೌಚಾಲಯಗಳಲ್ಲಿ ನಲ್ಲಿಗಳು ಅನೇಕ ದಿನಗಳಿಂದ ಕೆಟ್ಟು ಹೋಗಿವೆ. ಕೆಲ ಶೌಚಾಲಯಗಳ ಬೀಗ ಸಹ ತೆರಿದಿಲ್ಲ. ಅವ್ಯವಸ್ಥೆ ಇರುವುದರಿಂದ ಕಚೇರಿಗೆ ಬಂದ ಜನತೆ ಶೌಚಾಲಯ ಬಳಸುವುದು ಸಮಸ್ಯೆಯಾಗಿದೆ.
ಇಷ್ಟೇ ಅಲ್ಲದೆ ಕುಡಿಯುವ ನೀರಿನ ಫಿಲ್ಟರ್ ಗಳು ಕೂಡ ಕೆಟ್ಟುಹೋಗಿವೆ. ಇದರಿಂದಾಗಿ ಕುಡಿಯುವ ನೀರು ವ್ಯವಸ್ಥೆ ಇಲ್ಲದ ಪರಿಸ್ಥಿತಿ ಬಂದಿದೆ. ಅಲ್ಲದೆ ಲಿಫ್ಟ್ ಕೂಡಾ ಅನೇಕ ದಿನಗಳಿಂದ ಕೆಟ್ಟು ಹೋಗಿದೆ.
ಇನ್ನು ಇಲ್ಲಿ ಕ್ಯಾಂಟೀನ್ ಸೌಲಭ್ಯ ಇಲ್ಲದ ಕಾರಣ ಪ್ರತಿ ಕಚೇರಿಯಲ್ಲಿ ಹೋದಾಗ ಸಿಬ್ಬಂದಿ ಅಲ್ಲಿ ಇರಲ್ಲ. ಕೇಳಿದರೆ ಚಾಹಾ ಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಅರ್ಧತಾಸು ಆದರೂ ಬರಲ್ಲ. ಕೇಳಿದರೆ ಇಲ್ಲಿ ಕ್ಯಾಂಟೀನ್ ಇಲ್ಲ. ದೂರ ಹೋಗಬೇಕು ಎನ್ನುತ್ತಾರೆ. ಜನರಿಗೂ ಇಲ್ಲಿ ಕ್ಯಾಂಟೀನ್ ನ ಅಗತ್ಯತೆ ಇದೆ.
“ಕೂಡಲೇ ಶೌಚಾಲಯದ ನಲ್ಲಿ ಮತ್ತು ಫಿಲ್ಟರ್ ರಿಪೇರಿ ಮಾಡಿಸಬೇಕು ಇಲ್ಲದಿದ್ದರೆ ಸಾರ್ವಜನಿಕರಿಗೂ ಸಿಬ್ಬಂದಿಗೂ ಸಮಸ್ಯೆ ಆಗುತ್ತದೆ”.
ಆರ್.ವೆಂಕಟರೆಡ್ಡಿ, ಸಾಮಾಜಿಕ ಹೋರಾಟಗಾರ, ಬಳ್ಳಾರಿ.

