ಬಂದ್ ಗೆ ನೀರಸ ಪ್ರತಿಕ್ರಿಯೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್,  ದೊಡ್ಡಬಳ್ಳಾಪುರ:
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಮತ್ತು ನೂತನ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ
, ಜಂಟಿ ಕಾರ್ಮಿಕ ಸಂಘಗಳು ಕರೆಯಲಾಗಿದ್ದ ಬಂದ್ ಗೆ ದೊಡ್ಡಬಳ್ಳಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 ಪ್ರಮುಖ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಇಂದು ಮುಂಜಾನೆಯಿಂದಲೆ‌ ಬೈಕ್ ಜಾಥಾ ನಡೆಸಿ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಸಲ್ಲಿಸುವ ಮೂಲಕ ಮನವಿ ಮಾಡಿದ್ದು ಕಂಡುಬಂತು.

- Advertisement - 

 ದೇಶಾದ್ಯಂತ 24 ಗಂಟೆಗಳ ಅಖಿಲ ಭಾರತ ಮುಷ್ಕರಕ್ಕೆ (ಭಾರತ್ ಬಂದ್) ಕರೆ ನೀಡಿದ್ದ, 30 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸುವ ಈ ಮುಷ್ಕರದಿಂದ ಬ್ಯಾಂಕಿಂಗ್, ಸಾರಿಗೆ, ಕೈಗಾರಿಕೆ ಹಾಗೂ ದೈನಂದಿನ ಸೇವೆಗಳಲ್ಲಿ  ಸಹ ಯಾವುದೇ ರೀತಿಯ ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡುಬಂದಿಲ್ಲ.

ಮುಷ್ಕರದ ಪ್ರಮುಖ ವಂಶಗಳು-
ನವೆಂಬರ್
2025 ರಲ್ಲಿ ಜಾರಿಗೆ ಬಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು (Labour Codes) ಹಿಂಪಡೆಯಬೇಕು ಮತ್ತು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕು ಎಂಬುದು ಮುಖ್ಯ ಬೇಡಿಕೆ. ಬ್ಯಾಂಕ್, ವಿಮೆ, ಸಾರಿಗೆ (KSRTC), ಕೈಗಾರಿಕಾ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು ಮತ್ತು ರೈತ ಸಂಘಟನೆಗಳವರು ಭಾಗವಹಿಸಿದ್ದರು.

- Advertisement - 

ಬಸ್ ಮತ್ತು ಆಟೋ ಸೇವೆಗಳಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಿಲ್ಲ. ಕಾರ್ಖಾನೆಗಳು 24 ಗಂಟೆ ಸ್ಥಗಿತ ಕೊಳ್ಳದಿರುವುದು, ಶಾಲಾ ಕಾಲೇಜುಗಳು,ಅಂಗಡಿ ಮುಂಗಟ್ಟುಗಳು ಸಹ ಎಂದಿನಂತೆ ಕಾರ್ಯನಿರ್ವಹಣೆ.

ಈ ಮುಷ್ಕರವು ಇತ್ತೀಚಿನ ವರ್ಷಗಳಲ್ಲಿನ ಅತಿದೊಡ್ಡ ಕಾರ್ಮಿಕ ಮತ್ತು ಕೃಷಿ ಪ್ರತಿಭಟನೆಗಳಲ್ಲಿ ಒಂದಾಗಿದೆ.
ಜಂಟಿ ಕಾರ್ಮಿಕ ಸಂಘಗಳು ಹಾಗೂ ತಾಲ್ಲೂಕಿನ ವಿವಿಧ ಸಂಘಟನೆಗಳು ಶಾಂತಿಯುತ ಭಾರತ್ ಬಂದ್ ನಲ್ಲಿ ಭಾಗವಹಿಸಿದ್ದರು.

Share This Article
error: Content is protected !!
";