ಫೆ. 26ರಂದು ಮಧುರೆ ಶ್ರೀಶನಿ ಮಹಾತ್ಮ ಸ್ವಾಮಿಯ 71ನೇ ಬ್ರಹ್ಮ ರಥೋತ್ಸವ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಧುರೆ ಹೋಬಳಿ ಚಿಕ್ಕ ಮಧುರೆಯ (ಕನಸವಾಡಿ)ಇತಿಹಾಸ  ಪ್ರಸಿದ್ದ ಶ್ರೀ.ಶನಿಮಹಾತ್ಮಸ್ವಾಮಿಯ  71 ನೇಯ  ಬ್ರಹ್ಮ ರಥೋತ್ಸವವು ಪೆ.26 ರಂದು ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ರಾಜ್ ಕುಮಾ‌ರ್ ರವರು  ತಿಳಿಸಿದರು.

   ಮಧುರೆ ಶ್ರೀ.ಶನಿಮಹಾತ್ಮಸ್ವಾಮಿ ದೇವಾಲಯದ ಅನ್ನದಾಸೋಹ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವು ಬ್ರಹ್ಮರಥೋತ್ಸವ ನಡೆಯಲಿದ್ದು, ಈ ಭಾರಿ ಹಲವು ವಿಶೇಷತೆಗಳಿಂದ ಕೂಡಿರಲಿದೆ. ತಾಲ್ಲೂಕಿನೆಲ್ಲೆಡೆಯಿಂದ 101 ದೇವರುಗಳನ್ನು ಬೆಳ್ಳಿ ರಥದೊಂದಿಗೆ ಕರೆಸಿ ಮೂಲ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ ಶಾಲಾ ಆವರಣದಲ್ಲಿ ಸ್ಥಾಪಿಸಲಾಗುವುದು.

- Advertisement - 

26ರಂದು ಮಧ್ಯಾಹ್ನ 1:15ರಿಂದ 2:10 ಗಂಟೆಯೊಳಗೆ ಸಲ್ಲುವ ಶುಭಲಗ್ನದಲ್ಲಿ 71ನೇ ಬ್ರಹ್ಮರಥೋತ್ಸವ ನೆರವೇರಲಿದೆ.

ಫೆ.25ರಿಂದ ಮಾ.3 ರ ವರೆಗೆ ವಿಶೇಷವಾದ ಉತ್ಸವ ಕಾರ್ಯಕ್ರಮಗಳು ನೆರವೇರಲಿದೆ. ಕಾರ್ಯಕ್ರಮ ದಲ್ಲಿ ವಿಶೇಷವಾಗಿ ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಆಗಮಿಸಲಿದ್ದು,ಮೊಬೈಲ್‌ ಆರ್ಕೆಸ್ಟ್ರಾ, ಜಿ ಕನ್ನಡ ವಾಹಿನಿಯ ಸರಿಗಮಪ ತಂಡದ ಖ್ಯಾತ ಸಂಗೀತ ಚಲನಚಿತ್ರನಟರನ್ನೊಳಗೊಂಡ ಸಂಗೀತ ಸಂಜೆ ಸಂಜೆ, ಮದ್ದಿನ ಮರದ ಕಾರ್ಯಕ್ರಮ, ಕಾಕವಾಹನೋತ್ಸವ, ಚಂದ್ರಮಂಡಲೋತ್ಸವ, ಸುಪ್ರಭಾತೋತ್ಸವ, ಡೊಳ್ಳುಕುಣಿತ, ತೆಪ್ಪೋತ್ಸವ ಸೇರಿದಂತೆ ಹಲವು ಬಗೆಯ ಉತ್ಸವಗಳು ನೆರವೇರಲಿದೆ.

- Advertisement - 

ತಾಲ್ಲೂಕಿನ ಕಲಾವಿದರಿಂದ ಜಾನಪಗೀತೆ,ರಂಗಭೂಮಿ ಕಲಾವಿದರಿಂದ ನಾಟಕೋತ್ಸವ ಗಳು ನಡೆಯಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅದ್ಯಕ್ಷರಾದ ಚುಂಚೇಗೌಡ, ಮುಖಂಡರಾದ ನೆಲಮಂಗಲ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲ್ಲಣ್ಣ, ದೇವಾಲಯದ ಪ್ರಧಾನ ಧರ್ಮದರ್ಶಿ ಪ್ರಕಾಶ್, ಎಲ್ ಐಸಿ ಮಂಜುನಾಥ್, ಸ್ಥಳೀಯ ಮುಖಂಡರು ಹಾಜರಿದ್ದರು.

Share This Article
error: Content is protected !!
";