ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಹಾನಾಯಕ ದಲಿತ ಸೇನೆ ಜಿಲ್ಲಾಧ್ಯಕ್ಷರಾಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ದುರುಗೇಶ್ ಓ. ಇವರನ್ನು ನೇಮಕ ಮಾಡಲಾಗಿದೆ.
ಮಹಾನಾಯಕ ದಲಿತ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಎ.ತಾಳಿಕೆರೆ ಶುಕ್ರವಾರ ಪ್ರವಾಸಿ ಮಂದಿರದಲ್ಲಿ ದುರುಗೇಶ್ ಓ. ಇವರಿಗೆ ನೇಮಕ ಪತ್ರ ವಿತರಿಸಿ ಮಾತನಾಡುತ್ತ ಬುದ್ದ, ಬಸವ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಶೋಷಿತರು, ಅಸ್ಪೃಶ್ಯರು, ಧಮನಿತರ ಪರವಾಗಿ ನಿಲ್ಲಬೇಕು. ಎಲ್ಲಿ ಅನ್ಯಾಯ, ಶೋಷಣೆಯಾಗುತ್ತದೊ ಅಲ್ಲಿ ಪ್ರಾಮಾಣಿಕವಾಗಿ ಹೋರಾಡಿ ನೊಂದವರಿಗೆ ನ್ಯಾಯ ಒದಗಿಸುವಂತೆ ಸೂಚಿಸಿದರು.
ಮಹಾನಾಯಕ ದಲಿತ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ಕೆ.ಸಾಕ್ಯ, ಎಸ್ಸಿ.ಎಸ್ಟಿ.ದೌರ್ಜನ್ಯ ತಡೆ ಸಮಿತಿ ಸದಸ್ಯ ಪ್ರಶಾಂತ್ ಕೂಲಿಕರ್, ಪ್ರಜಾ ಕಲ್ಯಾಣ
ಸಮಿತಿ ಅಧ್ಯಕ್ಷ ಹರೀಶ್ ಟಿ.ಎನ್, ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ರಾಜ್ಯಾಧ್ಯಕ್ಷ ಜಪಾನ್ ಶ್ರೀನಿವಾಸ್, ಚಳ್ಳಕೆರೆ ಪೆನ್ನೇಶ್, ಚಂದ್ರು, ಚೇತನ, ಕೆಂಚಪ್ಪ ಪ್ರಜ್ವಲ್, ವಿಶ್ವಾಸ, ದಿನೇಶ್, ಹನುಮಂತ, ಸಿದ್ದೇಶ, ಪವನ್, ಬಾಬು ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

