ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಾವಣಗೆರೆಯ ಗುಂಡಿ ವೃತ್ತದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ವಿವಿಧ ಉದ್ಯಾನವನಗಳು ಹಾಗೂ ಪ್ರಮುಖ ವೃತ್ತಗಳ ಅಭಿವೃದ್ಧಿ ಕಾಮಗಾರಿಗಳಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಅಭಿವೃದ್ಧಿ ಕಾಮಗಾರಿಗಳ ವಿವರಗಳು ಹೀಗಿವೆ:
1. ಶೇಖರಪ್ಪ ಗೋಡೋನ್ ಸಮೀಪದ ಉದ್ಯಾನವನ ಅಭಿವೃದ್ಧಿ – 17 ಲಕ್ಷ
2. ಬಾಲಾಜಿ ನಗರ ಬಸವೇಶ್ವರ ಬಡಾವಣೆಯ ಡಬಲ್ ರಸ್ತೆ ಹಾಗೂ ಶ್ರೀ ಡಿ. ದೇವರಾಜ ಅರಸು ಬಡಾವಣೆಯ ರೈಲ್ವೆ ಮೇಲ್ಸೇತುವೆ ರಸ್ತೆಯ ಗುಂಡಿ ಮುಚ್ಚುವ ಕಾರ್ಯ – 10 ಲಕ್ಷ
3.ಬೀರೂರು–ಸಮ್ಮಸಗಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದ ಅಭಿವೃದ್ಧಿ – 25 ಲಕ್ಷ
4.ಮಹಾನಗರ ಪಾಲಿಕೆ ವ್ಯಾಪ್ತಿಯ ಇತರೆ ವೃತ್ತಗಳ ಅಭಿವೃದ್ಧಿ –25 ಲಕ್ಷ
ಈ ಕಾಮಗಾರಿಗಳು ನಗರದ ಸೌಂದರ್ಯವರ್ಧನೆಗೆ, ಸಂಚಾರ ಸುಗಮತೆಗೆ ಹಾಗೂ ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಡಾ.ಪ್ರಭಾ ಹೇಳಿದರು.

