ನನ್ನೂರು: ಭೀಮ ಪಲ್ಗುಣ ಹಿಡಂಬ ಪಟ್ಟಣ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನನ್ನೂರು
:
ಕದಂಬ ಹೆಜ್ಜೆಯ ಚೆಂದದೂರು
ಪುರಾಣ ಪುರಾವೆ ಶಾಸನಗಳ ಸಂತೆ 
ಭೀಮ ಪಲ್ಗುಣ ಹಿಡಂಬ ಪಟ್ಟಣ

ಪಾಂಡವ ಕುರುಹು ಪಂಚಲಿಂಗಗಳು
ದುರ್ಗಿಯರ ಯಶೋಗಾಥೆ
ಆದಿದೇವಿ ಏಕನಾಥೇ ಹುಚ್ಚಂಗಿ ಮಾತೆ

- Advertisement - 

ಅಮ್ಮ ಬರಿಗೇರಿ ತಿಪ್ಪಿನಕಟ್ಟಮ್ಮ
ಸಮೃದ್ಧ ಜಾನಪದ ಸಂಭ್ರಮ
ಮತ್ತಿ ತಿಮ್ಮಣ್ಣ ನಾಯಕರು

ಚಿಕ್ಕಣ್ಣ ಭರಮಣ್ಣ ಲಿಂಗಣ್ಣ
ಗಂಡೋಬಳವ್ವೆ ಮದಕರಿಗಳು
ಸುತ್ತು ಕೋಟೆಯ ರಣಕಲಿಗಳು

- Advertisement - 

ಮೈಸೂರು ಪ್ರಾಂತ್ಯ ಸಾಮಂತರು
ಪಾಳೇಪಟ್ಟಿನ ನಾಯಕ ಅರಸರು
ಸ್ವಾಮಿ ಮುರುಗೇಶ ಜೋಗಿನೆಲೆ ಸಿದ್ದರು

ಸೂಫಿಗಳ ದರ್ಗಾ ಮಸೀದಿ ಮಖಾನ
ಸಂತ ಹಟ್ಟಿತಿಪ್ಪಯ್ಯ ನಡೆದಾಡಿದೂರು
ರಂಗ ಧೀಮಂತ ಓಬಳೇಶರ ತವರೂರು

ತರಾಸು ಬಿ ಎಲ್ ವೇಣು ಅನೇಕರು
ಪುಸ್ತಕ ಭಂಡಾರಗಳ ಬರೆದವರು
ಪುಟ್ಟಣ್ಣಯ್ಯ ಬಿ ಎಲ್ ರೈಸ್

ಹುಲ್ಲೂರು ಜೋಯಿಸರು
ಲಕ್ಷ್ಮಣ ತೆಲಗಾವಿ ಇತರರು
ಗತ ಇತಿಹಾಸ ಶೋಧಕರು

ಜನ ನಾಯಕ ಭೀಮಪ್ಪ
ಗರಡಿಗಟ್ಟಿಗ ಹುಲಿಮಲ್ಲ ನಂಜಪ್ಪ
ಮುತ್ಸದ್ದಿ ನಿಜಲಿಂಗಪ್ಪನವರು

ಎಂದಿಗೂ ಮರೆಯಲಾರದವರು
ಚೆಂದದ ಮುಕುಟ ಮಾರಿಕಣಿವೆ
ದಟ್ಟ ಕಾಡು ಗವಿ ಬೆಟ್ಟ ಗುಡ್ಡಗಳು

ಕೆರೆ ಕಟ್ಟೆ ಬಾವಿ ಬಲ ತೊರೆಗಳು
ಪಕ್ಷಿ ಪ್ರಾಣಿ ಸರಿಸೃಪ ಸಂಕುಲ
ಅಮೂಲ್ಯ ಗಿಡಮೂಲಿಕೆಗಳ ಬೇರು

ಚಿನ್ಮುಲಾದ್ರಿ ಮುಡಿಗೇರಿದ
ಬಯಲಾಭರಣವ ಲೆಕ್ಕವಿಟ್ಟವರಾರು
ಕವಿತೆ:ಕುಮಾರ್ ಬಡಪ್ಪ

Share This Article
error: Content is protected !!
";