ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯೋಜನಾ ಸಮಿತಿಯ ಚುನಾವಣೆ ನಡೆದಿದ್ದು ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರದ ಹತ್ತು ಸ್ಥಾನಗಳಲ್ಲಿ ಬಿಜೆಪಿ ದಳ ಮೈತ್ರಿ ಕೂಟದ ಅಭ್ಯರ್ಥಿಗಳಾದ ಆರ್. ಲಕ್ಷ್ಮೀಪತಿ, ಎಂ. ಮಲ್ಲೇಶ್,
ವತ್ಸಲಾ, ಲೀಲಾ ಮಹೇಶ್, ಅಂಜನ್ ಮೂರ್ತಿ, ಎಂ.ಬೈರೇಗೌಡ,ಸಿ. ಎಂ. ರಾಮು, ವೇಣುಗೋಪಾಲ್, ಆರ್. ಸುನಿಲ್ ಮೂಡ್, ಅಂಜನ್ ಮೂರ್ತಿ (ಪಾಪಣ್ಣಿ )ಜಯಗಳಿಸಿದ್ದಾರೆ. ವಿಜೇತರನ್ನು ಹಲವಾರು ಗಣ್ಯರು, ಮುಖಂಡರುಗಳು ಅಭಿನಂದಿಸಿದ್ದಾರೆ.

