ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನವಾಗಿ ಪಿಎಸ್ಐ ಆಗಿ ಬಂದಿರುವ ಹರಿಯಬ್ಬೆ ಕಾಂತರಾಜ್ ರವರಿಗೆ ಆದಿ ಜಾಂಬವ ಅಭಿವೃದ್ಧಿ ನಿಗಮದ ಕ್ಯಾಲೆಂಡರ್ ಮತ್ತು ಡೈರಿಯನ್ನು ಕಾಂಗ್ರೆಸ್ ಮುಖಂಡ ಜಿ.ಎಲ್ ಮೂರ್ತಿ ಮತ್ತು ಇತರರು ನೀಡಿ ಶುಭಕೋರಿದರು.
ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು, ರೈತರ ಕೃಷಿ ಪಂಪ್ ಸೆಟ್ ಕಳವುಗಳನ್ನು ತಡೆಯಬೇಕು ಎಂದು ಇದೇ ಸಂದರ್ಭದಲ್ಲಿ ಕಾಂತರಾಜ್ ಅವರಿಗೆ ಅವರು ಮನವಿ ಮಾಡಿದರು.

