ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿದ ಶಾಸಕ ಶ್ರೀನಿವಾಸ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ  ಜನಪ್ರಿಯ ಶಾಸಕ ಡಾ. ಶ್ರೀನಿವಾಸ್ ಎನ್ ಟಿ ರವರು ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ ಗ್ರಾಮಗಳಲ್ಲಿ ಒಂದು ಕೋಟಿಗೂ ಅಧಿಕ ವೆಚ್ಚದ ಸಿಸಿ ರಸ್ತೆ ಹಾಗೂ ಇತರೆ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳಿನ್ನದೆ ಪಣತೊಟ್ಟು ಸೇವೆ ಸಲ್ಲಿಸುತ್ತೇನೆ. ನಿಮ್ಮ ಗ್ರಾಮಗಳ  ಯಾವುದೇ ಕೊಂದು ಕೊರತೆ ಹಾಗೂ ಕಾಮಗಾರಿಗಳ ಸಮಸ್ಯೆ ಇದ್ದಲ್ಲಿ ನನಗೆ ಒಂದು ಪತ್ರದ ಮೂಲಕ ಮನವಿ ಸಲ್ಲಿಸಿ ಎಂದರು.

ನಾನು ಶಾಸಕರನ್ನು ಭೇಟಿ ನೀಡಿ ದಲಿತ ಕಾಲೋನಿಯಲ್ಲಿ ರಸ್ತೆಯ ಸಮಸ್ಯೆ ಇರುತ್ತದೆ ಮಳೆಗಾಲದ ಸಂದರ್ಭದಲ್ಲಿ ಮಹಾಸವಾರರು ದನ ಕರುಗಳು ಓಡಾಡಲು ತುಂಬಾ ಸಮಸ್ಯೆ ಇದೆ ಎಂದು ಪತ್ರದ ಮೂಲಕ ಮನವಿ ಸಲ್ಲಿಸಿದೆ. ಆ ಪತ್ರಿಕೆ ಸ್ಪಂದಿಸಿ ಕೆಲವೇ ದಿನಗಳಲ್ಲಿ ದಲಿತ ಕಾಲೋನಿಗೆ  50 ಲಕ್ಷ ಸಿಸಿ ರಸ್ತೆ ಚರಂಡಿ ನಿರ್ಮಿಸಲು ಭೂಮಿ ಪೂಜೆ ಸಲ್ಲಿಸಿದ ನಮ್ಮ ಶಾಸಕರಿಗೆ ತುಂಬು ಹೃದಯದ ಧನ್ಯವಾದಗಳು.
ಸಿ.ಅರುಣ್ ಕುಮಾರ್, ರಾಜ್ಯ ಸಹಾಯಕರು, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ.

- Advertisement - 

ಹುಡೇಂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೂ ಕೋಟ್ಯಾಂತರ ರೋಗಗಳಲ್ಲಿ ಈಗಾಗಲೇ ಭೂಮಿ ಪೂಜೆ ಸಲ್ಲಿಸಿದ್ದಾರೆ. ನೂತನ ಕಾಮಗಾರಿಗಳನ್ನು ಉದ್ಘಾಟನೆ ಸಹ ಮಾಡಿದ್ದಾರೆ ಮತ್ತು ಜುಮ್ಮೋಬನಹಳ್ಳಿ ಗ್ರಾಮ ದೇವತೆ ಶ್ರೀ ಮಲಿಯಮ್ಮ ದೇವಸ್ಥಾನದ ಆವರಣದಲ್ಲಿ ಒಂದು ಕೋಟಿ ವೆಚ್ಚದ ಗ್ಯಾಲರಿ ನಿರ್ಮಿಸಿ ಉದ್ಘಾಟಿಸಿದ್ದಾರೆ.
ನೇತ್ರಮ್ಮ ಜಿ ಓಬಣ್ಣ
, ಮಾಜಿ ತಾಲೂಕು ಪಂಚಾಯಿತಿ ಸದಸ್ಯ.

ಈ ಭೂಮಿ ಪೂಜ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ತಿಪ್ಪಮ್ಮ, ನಾಗರಾಜ್, ಪೂಜಾರಿ ಪಾಲಣ್ಣ ಜಿಎಸ್, ಟಿ ಡಿ ಪಾಪಣ್ಣ, ತಿಪ್ಪೇಸ್ವಾಮಿ, ಮುದ್ರೆಯ್ಯನರ ನಾಗರಾಜ್, ಈ ಶರಣೀಶ,  ಎ ರಾಜಣ್ಣ,  ಸೋಮಣ್ಣ ಟಿ ಎನ್, ಮಾಜಿ ಅಧ್ಯಕ್ಷ ಸಾಕಮ್ಮ, ಬೋರಣ್ಣ, ಜಿ ಎಸ್ ರವಿ, ತಿಪ್ಪಣ್ಣ, ಸಿಟಿ ಅಜ್ಜಯ್ಯ, ಎ ವೆಂಕಟೇಶ, ಹನುಮಂತ ಮತ್ತು  ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರು ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರಗಳು ಹಾಗೂ ಗ್ರಾಮದ ಎಲ್ಲಾ ಮುಖಂಡರು ಮಹಿಳೆಯರು ಇದ್ದರು.

- Advertisement - 

 

Share This Article
error: Content is protected !!
";