ಭೂಸ್ವಾಧೀನ ದರ ಪರಿಷ್ಕರಣೆ:ಕೃಷ್ಣ ಬೈರೇಗೌಡ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ಜಮೀನುಗಳ ಪರಿಹಾರದ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವುದು ಮಾತ್ರವೇ ಸೂಕ್ತ ಪರಿಹಾರ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನ ಪರಿಷತ್‍ಅಧಿವೇಶನದಲ್ಲಿ ಸದಸ್ಯರಾದ ಕೆ.ಎಸ್. ನವೀನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂಸ್ವಾಧೀನ ಕಾಯ್ದೆ 2013ರಡಿ ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನುಗಳಿಗೆ ಮೌಲ್ಯಗಳನ್ನು ನಿಗದಿಪಡಿಸಲು ಭೂಸ್ವಾಧೀನ ಅಧಿಸೂಚನೆ ಹೊರಡಿಸಿರುವ ದಿನಾಂಕದ ಹಿಂದಿನ ಮೂರು ವರ್ಷಗಳ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮಾರಾಟವಾದ ಕ್ರಯಗಳನ್ನು ಪಡೆದು, ಸದರಿ ಕ್ರಯಗಳಲ್ಲಿ ಅತಿ ಹೆಚ್ಚು ದರಕ್ಕೆ ಮಾರಾಟವಾದ ಶೇ.50 ರಷ್ಟು ಕ್ರಯಗಳನ್ನು ಪರಿಗಣಿಸಿ ಅದರನ್ವಯ ಸ್ವಾಧೀನಪಡಿಸಿಕೊಳ್ಳುವ ಜಮೀನಿನ ದರ ನಿಗದಿಪಡಿಸಲಾಗುತ್ತಿದೆ.

- Advertisement - 

ಮುಂದುವರಿದು ಭೂಸ್ವಾಧೀನಗೊಳ್ಳುವ ಜಮೀನುಗಳಿಗೆ ದರ ನಿಗಧಿಪಡಿಸುವಲ್ಲಿ ಭೂಸ್ವಾಧೀನ ಕಾಯ್ದೆಯ ಮಾನದಂಡಗಳನ್ವಯ ದರ ನಿಗಧಿಪಡಿಸಲಾಗುತ್ತಿದ್ದು, ಸದರಿ ದರಕ್ಕೆ ಪ್ರಾಥಮಿಕ ಅಧಿಸೂಚನೆ ದಿನಾಂಕದಿಂದ ಐತೀರ್ಪು ಘೋಷಣೆಯ ದಿನಾಂಕದವರೆಗಿನ ದಿನಗಳಿಗೆ ಮೂಲ ಮಾರುಕಟ್ಟೆ ಮೌಲ್ಯಕ್ಕೆ ಶೇ.12 ರಷ್ಟು ಹೆಚ್ಚುವರಿ ಮಾರುಕಟ್ಟೆ ಮೌಲ್ಯಗಳನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು.

 

- Advertisement - 

 

Share This Article
error: Content is protected !!
";