ಮಾರ್ಚ್ ೧೫ ರಂದು ಬೃಹತ್ ವಧು-ವರ ಸಮಾನ್ವೇಷಣ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ಷಯ ವಿಪ್ರ ಮಹಾಸಭಾ ಸಂಘದ ವಿವಿಧ ಕಲ್ಯಾಣ ಯೋಜನೆಗಳ ಭಾಗವಾಗಿ ಮಾರ್ಚ್-15 ರಂದು ಬೆಂಗಳೂರು ಬಸವನಗುಡಿಯಲ್ಲಿ ಬೃಹತ್ ವಧು ವರ ಸಮಾನ್ವೇಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನ್ಯಾಯಾಧೀಶರಾದ ವಿ. ಶ್ರೀಶಾನಂದ, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಶಾಸಕರುಗಳಾದ ರವಿಸುಬ್ರಮಣ್ಯ ಮತ್ತು ಸಿ.ಕೆ. ರಾಮಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್‌ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

- Advertisement - 

ಬೆಂಗಳೂರಿನ ಕೆ.ಆರ್.ರಸ್ತೆಯ ನೆಟ್ಟಕಲ್ಲಪ್ಪ ವೃತ್ತದ ಬಸವನಗುಡಿಯ ನಂ.೫೦.ರಲ್ಲಿರುವ ದ್ವಾರಕನಾಥ ಭವನದಲ್ಲಿ ಭಾನುವಾರ ಬೆಳಿಗ್ಗೆ ೯-೩೦ರಿಂದ ತ್ರಿಮಸ್ಥ ಬ್ರಾಹ್ಮಣರಿಗಾಗಿ ಈ ಸಮಾವೇಶ ಆಯೋಜಿಸಲಾಗಿದೆ.

ಸುಮಾರು ೨೦ ವರ್ಷಗಳ ವಧು-ವರಾನ್ವೇಷಣ ಸಮಾವೇಶ ಅನುಭವ, ಪೋಷಕರೊಂದಿಗೆ ೫೦೦ ವಧು-ವರರ ಪಾಲ್ಗೊಳ್ಳುವಿಕೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಷ್ಠಿತ ಸಂಯೋಜಕರಿಂದ ವಧು-ವರ ವಿವರಗಳನ್ನು ಡಿಜಿಟಲ್ ಡಿಸ್ಪ್ಲೇ  ಮುಖೇನ ವಿವರಣೆ ನೀಡಲಾಗುತ್ತದೆ. ವಧು – ವರರ ನೇರ ಸಂಪರ್ಕಕ್ಕೆ ಅವಕಾಶವಿದ್ದು `ಜಾತಕಪರಿಶೀಲನೆಗೆ ಜ್ಯೋತಿಷಿಗಳ ಉಪಸ್ಥಿತಿ ಇರಲಿದೆ.

- Advertisement - 

ಸಮಾವೇಶ ನಂತರ ಮೂರು ತಿಂಗಳಿಗೊಮ್ಮೆ ಮುಖಾ – ಮುಖಿ ಸಮಾವೇಶಗಳಿಗೆ ಅವಕಾಶ ನೀಡಲಾಗುತ್ತದೆ. ಅರ್ಹ ಆಸಕ್ತರು ತಮ್ಮ ಹೆಸರನ್ನು ಪೋಸ್ಟ್ ಕಾರ್ಡ್ ಗಾತ್ರದ ೨ ಫೋಟೋ ಮತ್ತು ಜಾತಕದ ಪ್ರತಿಯೊಂದಿಗೆ ನೋಂದಾಯಿಸಬೇಕು. ಈ ಸಮಾವೇಶಕ್ಕೆ ನೋಂದಣಿ ಶುಲ್ಕ ಅನ್ವಯಿಸುತ್ತದೆ. Online Registration Website: www.akshayavipra.in̤ ಹೆಚ್ಚಿನ ವಿವರಗಳಿಗೆ  ಮಬೈಲ್: 9740514315/9731770324/8618092315 8884172840/8147337593, 9845644950 ಸಂಪರ್ಕಿಸಲು ಕೋರುತ್ತೇವೆ.

 

Share This Article
error: Content is protected !!
";