ಮಳೆ ಗಾಳಿ ಅಬ್ಬರಕ್ಕೆ ಹೈರಾಣಾದ ಜನತೆ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ: ಹಿಂದೂಗಳ ಹೂಸ ವರ್ಷರಂಭಕ್ಕೂ ಮುನ್ನ ವರ್ಷ ಧಾರೆ ಧರೆಗಿಳಿದು ಬಹಳಸ್ಟು ಅವಾಂತರಗಳು ಸೃಷ್ಠಿ ಮಾಡಿದೆ. ಯುಗಾದಿಗೆ ತಂಪೆರೆದು ಸ್ವಾಗತ ಕೋರಿದೆ. ಭಾರಿ ಬಿರುಗಾಳಿ ಸಹಿತ ಸುರಿದ ಮಳೆಯ ಆರ್ಭಟಕ್ಕೆ ದೊಡ್ಡಬಳ್ಳಾಪುರದ ಅನೇಕ ಕಡೆ ಮರಗಳು, ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್ಗಳು ನೆಲಕ್ಕುರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತ ಗೊಂಡು ಜನಜೀವನ ಅಸ್ತವ್ಯಸ್ತ ಗೊಂಡಿತ್ತು.
ಭಾರಿ ಗಾಳಿಯ ಅಬ್ಬರದಿಂದ ವಾಹನ ಸವಾರರು ಹೈರಾಣಾಗಿದ್ದು, ರಾಜ್ಯ ಹೆದ್ದಾರಿ ತಪಸೀಹಳ್ಳಿ ಬಳಿ ಬುಧವಾರ ರಾತ್ರಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ರಸ್ತೆಯ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ವಾಹನಗಳು ಗಂಟೆಗಳ ಕಾಲ ರಸ್ತೆಯಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಉಂಟಾಗಿತ್ತು.ಮದುರೆ ನೆಲಮಂಗಲ ಮುಖ್ಯರಸ್ತೆಯ ಉದ್ದಕ್ಕೂ ಮರಗಳು ಬಿದ್ದ ಪರಿಣಾಮ ನೂರಾರು ಬೃಹತ್ ವಾಹನಗಳು ಗಂಟೆ ಗಟ್ಟಲೆ ಟ್ರಾಫಿಕ್ ನಲ್ಲಿ ಕೊಳೆಯುವಂತಾಗಿತ್ತು.
ನಗರದ ಜಾಲಪ್ಪ ಕಾಲೇಜು ರಸ್ತೆಯಲ್ಲಿ ಎರಡು ಮರಗಳು ಮತ್ತು ವಿದ್ಯುತ್ ಕಂಬ ಉರುಳಿ ಬಿದ್ದಿವೆ, ನಗರಸಭೆ ಕಚೇರಿ ರಸ್ತೆಯಲ್ಲೂ ಮರ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಯಿತು.
ದೊಡ್ಡಬಳ್ಳಾಪುರ ದಿಂದ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಸಾಕಷ್ಠು ಮರಗಳು ಹಾಗು ವಿದ್ಯುತ್ ಕಂಭಗಳು ಮುರಿದು ಬಿದ್ದಿರುವ ಕಾರಣ ಯುಗಾದಿಯ ಹಬ್ಬದ ದಿನ ಹಾಡೋನಹಳ್ಳಿ ನಾಗೇನಹಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ. ವಿದ್ಯುತ್ ವ್ಯತ್ಯಯ ಉಂಟಾಗಿ ಬೆಳಕು ಇಲ್ಲದೆ ಕತ್ತಲ್ಲಿ ಹಬ್ಬದ ಸಿದ್ಧತೆಗೆ ಅಡಚಣೆ ಉಂಟಾಗಿದೆ. ಅರಳು ಮಲ್ಲಿಗೆ ಬಾಗಿಲು ವಿಶ್ವೇಶ್ವರಯ್ಯ ವೃತ್ತದ ಬಳಿ ರಸ್ತೆ ಬದಿಯ ಮರವೊಂದು ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಕಾಂಪೌಂಡ್ ಮೇಲೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅರಳು ಮಲ್ಲಿಗೆ ಬಾಗಿಲ ಪ್ರೌಢಶಾಲೆ ಪಕ್ಕದ ರಾಜ ಕಾಲುವೆ ತುಂಬಿ ಹರಿದಿದ್ದರಿಂದ ರಸ್ತೆ ಕೆರೆಯಂತಾಗಿತ್ತು.ಇದರಿಂದ ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕಿದರು.
ಇನ್ನೊಂದೆಡೆ ತಾಲ್ಲೂಕಿನ ಮೇಷ್ಟ್ರು ಮನೆ ಕ್ರಾಸ್ ರಸ್ತೆಯಿಂದ ನೇರಳಘಟ್ಟ ಗ್ರಾಮದವರೆಗೆ ರಸ್ತೆ ಉದ್ದಕ್ಕೂ ಮರಗಳು ಬಿದ್ದು ವಿದ್ಯುತ್ ಕಂಬಗಳು ಮುರಿದಿವೆ. ಪರಿಣಾಮ ಈ ಭಾಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ತಾಲ್ಲೂಕಿನ ಗ್ರಾಮಾಂತರ ಬಾಗದಲ್ಲಿ ರೈತರು ಬೆಳೆದ ಬಾಳೆ, ಹಲಸು,ಮಾವಿನ ಮರದ ಕೊಂಬೆಗಳು ಮುರಿದು ವರ್ಷ ಪೂರ್ಣ ಬೆಳೆಯ ನಿರೀ ಕ್ಷೆಯಲಿದ್ದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ತಾಲ್ಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಈ ನಡುವೆ ಬಂಗಾಳ ಕೊಲ್ಲಿಯಲ್ಲಿ ಮೇಲೆ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಮಾ.25ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

