ಹಿರಿಯೂರಿನಲ್ಲಿ ಸಂಭ್ರಮದ ರಂಜಾನ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಹಿರಿಯೂರಿನಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಇಲ್ಲಿನ ಜಾಮಿಯ ಮಸೀದಿ ಬಳಿ ಸೇರಿದ ಮುಸ್ಲಿಂ ಬಾಂಧವರು ಅಲ್ಲಿಂದ ಹೊರಟು ಅಲ್ಲಾ ಹೋ ಅಕ್ಬರ್ ಎಂದು ಹೇಳುತ್ತಾ ತೇರುಮಲೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ನೆಹರು ವೃತ್ತ ಗಾಂದಿ ವೃತ್ತದ ಮೂಲಕ ಮೈಸೂರು ಬ್ಯಾಂಕ್ ಬಳಿ ಇರುವ ಪ್ರಾರ್ಥನಾ ಸ್ಥಳಕ್ಕೆ ತಲುಪಿದರು.

- Advertisement - 

ಜಾಮಿಯ ಮಸೀದಿ ಅಧ್ಯಕ್ಷ ಮುನಿರ್ ಮುಲ್ಲಾ, ಗುರುಗಳಾದ ಸಿಗ್ಬತ್ ಹಾಗೂ ಅನೇಕ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಆಗಮಿಸಿ ರಂಜಾನ್ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಅವರು ನಾವೆಲ್ಲರೂ ಒಂದೇ ಪ್ರೀತಿ-ವಿಶ್ವಾಸ ಸ್ನೇಹ ಸಂಬಂಧಗಳು ಸದಾ ಹೀಗೆ ಇರಲಿ ನಾಡಿನದ್ಯಂತ ಸಮೃದ್ಧಿ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.

- Advertisement - 

ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರ ಲಿಂಗೇಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆರ್ ನಾಗೇಂದ್ರ ನಾಯ್ಕ, ವಿ ಶಿವಕುಮಾರ್, ಹಿರಿಯೂರು ಟೌನ್ ಸೊಸೈಟಿ ಅಧ್ಯಕ್ಷ ಸಾದತ್ ಹಾಗೂ ನಗರದ ಮುಸ್ಲಿಂ ಬಂದವರು ಇದ್ದರು.

Share This Article
error: Content is protected !!
";