ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದಶಕಗಳ ಕಾಲದ ಕನಸು ಕೊನೆಗೂ ನನಸಾಗಿದ್ದು, ಚಿತ್ರದುರ್ಗ ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.
2026-27ನೇ ಶೈಕ್ಷಣಿಕ ಸಾಲಿಗೆ 1ನೇ ತರಗತಿಯಿಂದ 5ನೇ ತರಗತಿಯವರೆಗೆ ದಾಖಲಾತಿ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ಪ್ರಸ್ತುತ ಈ ಶಾಲೆಯು ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ವಿಭಾಗದಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲಿದೆ.
ದಾಖಲಾತಿ ಪ್ರಕ್ರಿಯೆಯ ವಿವರಗಳು:
1ನೇ ತರಗತಿ ಪ್ರವೇಶ: ಪೋಷಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ವೆಬ್ಸೈಟ್: admission.kvs.gov.in ಅವಧಿ: 20.03.2026 ರಿಂದ 02.04.2026ರವರೆಗೆ.
2ನೇ ತರಗತಿಯಿಂದ 5ನೇ ತರಗತಿ ಪ್ರವೇಶ: ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ವಿಧಾನ: ಪೋಷಕರು ನೇರವಾಗಿ ಸರ್ಕಾರಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ ಅರ್ಜಿ ಪಡೆದು ಸಲ್ಲಿಸಬೇಕು.
ಅವಧಿ: 02.04.2026 (ಬೆಳಿಗ್ಗೆ 10:00) ರಿಂದ 08.04.2026 (ಸಂಜೆ 4:00) ರವರೆಗೆ.
ಪ್ರಮುಖ ಮಾಹಿತಿಗಳು:
ಸೀಟುಗಳ ಮಿತಿ: ಪ್ರತಿ ತರಗತಿಗೆ ಕೇವಲ 40 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದೆ.
ಕೊನೆಯ ದಿನಾಂಕ: ಆಯ್ಕೆಯಾದ ಮಕ್ಕಳು ದಾಖಲಾಗಲು 30.06.2026 ಕೊನೆಯ ದಿನವಾಗಿರುತ್ತದೆ.
ಸೂಚನೆ: ಇದು ವಸತಿ ರಹಿತ ಶಾಲೆಯಾಗಿದ್ದು, ಯಾವುದೇ ಹಾಸ್ಟೆಲ್ ವ್ಯವಸ್ಥೆ ಇರುವುದಿಲ್ಲ. ದೀರ್ಘಕಾಲದ ಬೇಡಿಕೆಯಾಗಿದ್ದ ಈ ಶಾಲೆಯ ಸೌಲಭ್ಯವನ್ನು ಜಿಲ್ಲೆಯ ಪೋಷಕರು ಮತ್ತು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸದರ ಆಪ್ತ ಸಹಾಯಕ ಸಿ.ಹೆಚ್. ದೇವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

