ಕೈವಾರ ತಾತಯ್ಯ ಜಯಂತಿ–ಶ್ರೀರಾಮನವಮಿ ಆಚರಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೈವಾರ ತಾತಯ್ಯನವರು ಸಾರಿದ ಮಾನವೀಯ ಮೌಲ್ಯಗಳು ಹಾಗೂ ಭಕ್ತಿತತ್ವಗಳು ಸಮಾಜಕ್ಕೆ ಶಾಶ್ವತ ದಾರಿದೀಪವಾಗಿವೆ. ಇಂದಿನ ಯುವ ಪೀಳಿಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜು ಹೇಳಿದರು.

ತೂಬಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬಲಿಜ ಸಮಾಜದ ವತಿಯಿಂದ ಆಯೋಜಿಸಿದ್ದ ಕೈವಾರ ತಾತಯ್ಯ ಜಯಂತಿ ಹಾಗೂ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಭಕ್ತಿ, ತ್ಯಾಗ ಮತ್ತು ಜನಸೇವೆಯ ಮೂಲಕ ಕೈವಾರ ತಾತಯ್ಯನವರು  ಸಮಾಜಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸುವಲ್ಲಿ ಇಂತಹ ಆಚರಣೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

- Advertisement - 

ತೂಬಗೆರೆ ಹೋಬಳಿ ಬಿಜೆಪಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಯೋಗಿನಾರೇಯಣರಾದ ಕೈವಾರ ತಾತಯ್ಯರು ಪ್ರಸಿದ್ಧ ಸಂತ, ಕಾಲಜ್ಞಾನಿ ಮತ್ತು ಕವಿ. ಕಾಲಜ್ಞಾನಗ್ರಂಥದ ಮೂಲಕ ತತ್ವ ಸಂದೇಶಗಳನ್ನು ನೀಡಿದ್ದಾರೆ. ಜಾತಿ-ಮತ ಭೇದವನ್ನು ವಿರೋಧಿಸಿ ಸನ್ಮಾರ್ಗ ಬೋಧಿಸಿದ ಅವರು ಜೀವಂತ ಸಮಾಧಿಯಾದ ಮಹನೀಯರು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿನ ಮಹಿಳೆಯರಿಗೆ ಉಚಿತವಾಗಿ ಬಳೆ‌ವಿತರಣೆ ಹಾಗೂ ಅನ್ನದಾನ ಮಾಡಲಾಯಿತು.

- Advertisement - 

ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ತಂಡ ಕೈವಾರ ತಾತಯ್ಯನವರ  ಕೀರ್ತನೆಗಳನ್ನು ಹಾಡಿ ಭಕ್ತರನ್ನು ಮನಸೆಳೆದರು.ಕೀರ್ತನೆಗಳ ಮೂಲಕ ತಾತಯ್ಯನವರ ಭಕ್ತಿ ಪರಂಪರೆ ಹಾಗೂ ತತ್ವ ಸಂದೇಶಗಳನ್ನು ಪರಿಚಯಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಉಪತಹಸೀಲ್ದಾರ್ ವೆಂಕಟರಮಣಪ್ಪ, ಬಿಜೆಪಿ ಮುಖಂಡ ಪ್ರತಾಪ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಕನಕದಾಸ, ದಿಬ್ಬ ಗಿರಿಯಪ್ಪ, ಯುವ ಮುಖಂಡ ಉದಯ ಆರಾಧ್ಯ, ಬಲಿಜ ಸಮಾಜದ ಅವಲಪ್ಪ, ವೆಂಕಟಪ್ಪ, ಅಶ್ವತ್ಥಪ್ಪ, ಚಿಕ್ಕಪ್ಪಯ್ಯ, ಮಂಜುನಾಥ್, ಪತ್ರಕರ್ತರಾದ ಶಿವು, ವಿಕಾಸ್, ರಘು, ಸಿ ಎಮ್ ಕೃಷ್ಣಪ್ಪ , ಉಮೇಶ್ ಬಾಬು, ವಿಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Share This Article
error: Content is protected !!
";