16 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಅಡ್ಡಗಾಲು ಬೇಡ; ಅಪಪ್ರಚಾರ ಮಾಡುವವರಿಗೆ ಕಾಂಗ್ರೆಸ್‌ಕಾರ್ಯಕರ್ತರ ಎಚ್ಚರಿಕೆ

News Desk
- Advertisement -  - Advertisement - 

​ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಜೆ.ಜೆ. ಹಳ್ಳಿ ಹೋಬಳಿಯ 16 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಚಿವ ಡಿ. ಸುಧಾಕರ್ ಅವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರು, ಹಿರಿಯೂರು ತಾಲೂಕಿನ ಅಭಿವೃದ್ಧಿಯೇ ಸಚಿವರ ಏಕೈಕ ಗುರಿಯಾಗಿದೆ. ರೈತರ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಪವಿತ್ರ ಕೆಲಸದ ಬಗ್ಗೆ ಕೀಳುಮಟ್ಟದ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

- Advertisement - 

​​ಜೀವನಾಡಿ ಯೋಜನೆ: ಕಳೆದ ಎರಡು ವರ್ಷಗಳಿಂದ ಕಳುವಳ್ಳಿ ಭಾಗದ ಸುಮಾರು 100 ಹಳ್ಳಿಗಳ ಜನರ ಬದುಕಿಗೆ ಆಧಾರವಾಗಿರುವ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಸಚಿವರು ಶ್ರಮಿಸುತ್ತಿದ್ದಾರೆ.

​ಅವಿರತ ಶ್ರಮ: ಸಚಿವರಾದ ಡಿ. ಸುಧಾಕರ್, ಎ.ಎಂ. ಅಮೃತೇಶ್ವರಸ್ವಾಮಿ, ಗರೀಬ್ ಅಲಿ (ಮುನ್ನ) ಹಾಗೂ ಸಹಾಯಕ ಪ್ರಕಾಶ್ ಅವರು ಹಗಲಿರುಳು ಈ ಯೋಜನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

- Advertisement - 

​ನಿರಂತರ ಸಭೆಗಳು: ಕಳೆದ ಎರಡು ವರ್ಷಗಳಲ್ಲಿ 40 ರಿಂದ 50ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ, ಯೋಜನೆಯ ಪ್ರತಿಯೊಂದು ಹಂತವನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ.

​ಏಪ್ರಿಲ್ 9ರ ಸಭೆ ಅತ್ಯಂತ ನಿರ್ಣಾಯಕ:
​ಬರುವ ಏಪ್ರಿಲ್ 9
, 2026 ರಂದು ನಡೆಯಲಿರುವ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ಯೋಜನೆಯನ್ನು ಮಂಡಿಸುವುದು ಅತ್ಯಗತ್ಯವಾಗಿದೆ. ಪೈಪ್‌ಲೈನ್ ಉದ್ದ, ಅಂದಾಜು ವೆಚ್ಚ ಹಾಗೂ ನೀರು ತುಂಬಿಸುವ ತಾಂತ್ರಿಕ ವಿವರಗಳ ಬಗ್ಗೆ ಈಗಾಗಲೇ ಬೆಂಗಳೂರಿನಲ್ಲಿ ಸವಿಸ್ತಾರ ಚರ್ಚೆ ನಡೆಸಲಾಗಿದೆ.

​”ಸಚಿವರು ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದಾಗಲೂ ಜನರ ಹಿತದೃಷ್ಟಿಯಿಂದ ಸಭೆ ನಡೆಸಲಾಗಿದೆ. ಈ ಅವಕಾಶ ಕೈತಪ್ಪಿದರೆ ಮತ್ತೆ ಯಾವಾಗ ಸಿಗುತ್ತದೆ ಎಂಬ ಆತಂಕ ನಮ್ಮದು. ವೈಯಕ್ತಿಕ ಕಷ್ಟಗಳ ನಡುವೆಯೂ ಸಚಿವರು ಸಮಯ ಮೀಸಲಿಟ್ಟಿದ್ದಾರೆ. ಇದನ್ನು ಟೀಕಿಸುವವರು ಈ ಭಾಗದ ಅಭಿವೃದ್ಧಿ ವಿರೋಧಿಗಳು.”
ಕಾಂಗ್ರೆಸ್ ಮುಖಂಡರು.

​ಅಭಿವೃದ್ಧಿ ವಿರೋಧಿಗಳಿಗೆ ಎಚ್ಚರಿಕೆ:
​ಅಸೂಯೆ ಎಂಬುದು ಬೆಂಕಿಯಿದ್ದಂತೆ
, ಅದು ಹುಟ್ಟಿದ ಜಾಗವನ್ನೇ ಸುಡುತ್ತದೆ ಎಂದು ಮಾರ್ಮಿಕವಾಗಿ ನುಡಿದ ಕಾರ್ಯಕರ್ತರು, “ಹುಚ್ಚೆಯಲ್ಲಿ ಮೀನು ಹಿಡಿಯುವ” ಬುದ್ಧಿ ಬಿಟ್ಟು ಒಳ್ಳೆಯ ಕೆಲಸಕ್ಕೆ ಸಹಕರಿಸಿ ಎಂದರು. ಇದು ಕೇವಲ ರಾಜಕೀಯವಲ್ಲ, ಬದಲಾಗಿ ನೂರಾರು ಹಳ್ಳಿಗಳ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಜನರ ಹಕ್ಕಿಗಾಗಿ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ತರಬೇಡಿ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.

​​ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಕಿಸಾನ್ ಘಟಕದ ಅಧ್ಯಕ್ಷ ಜೆಜೆಹಳ್ಳಿ ಕೇಶವಮೂರ್ತಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಿಗಳಿಕಟ್ಟೆ ಕಾಂತರಾಜು, ಪಿಟ್ಲಾಲಿ ರವಿ, ನಗರಸಭೆ ಮಾಜಿ ಸದಸ್ಯ ಜಿ ಪ್ರೇಮ್ ಕುಮಾರ್, ದಿಂಡಾವರ ಮಹೇಶ್, ದಿಂಡಾವರ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ವಕೀಲರು ರಂಗಸ್ವಾಮಿ, ಪರಮೇನಹಳ್ಳಿ ಬೈರೇಶ್, ಸುಬ್ಬಣ್ಣ, ತಿಪ್ಪೇಸ್ವಾಮಿ, ಪಾಲಾಕ್ಷ, ಉಡುವಳ್ಳಿ ಶಮ್ಮು, ಕಾಂಗ್ರೆಸ್ ಕಾರ್ಯಕರ್ತರ ಅಭಿಮಾನಿಗಳು ಇದ್ದರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

 

Share This Article
error: Content is protected !!
";